ಸತ್ಯಸಾಯಿ ಟ್ರಸ್ಟ್ ಸೇವೆಗೆ ಹುಕ್ಕೇರಿ ಸ್ವಾಮೀಜಿ ಅಭಿನಂದನೆ

ಬೆಂಗಳೂರು: ಸೇವೆ ಎಂಬ ಸರಳ ಮಾರ್ಗದಿಂದ ಸಾರ್ಥಕತೆ ಪಡೆದ ಶ್ರೀಸತ್ಯಸಾಯಿ ಬಾಬಾರವರು ತಮ್ಮ ಸಂಸ್ಥೆಯ ಮೂಲಕ ಸಮಾಜಕ್ಕೆ ಮಾಡಿದ ಸೇವೆ ಅಪಾರ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಿಸಿದ್ದಾರೆ. ಭೂಮಿಯ ಮೇಲೆ ಹುಟ್ಟಿದ ವ್ಯಕ್ತಿ ಜೀವನದಲ್ಲಿ ಸಾರ್ಥಕತೆ ಪಡೆಯಲು ಹಲವು ಮಾರ್ಗಗಳಿವೆ. ಅವುಗಳಲ್ಲಿ ಸೇವೆ ಪ್ರಮುಖವಾದ ಮಾರ್ಗ. ಬೇರೆಲ್ಲಾ ಮಾರ್ಗಗಳಿಂದ ಕೇವಲ ಆತ್ಮೋನ್ನತಿ, ಆತ್ಮಜ್ಞಾನ, ಅರಿವು ಇತ್ಯಾದಿ ಲಭ್ಯವಾದರೆ; ಸೇವೆಯಿಂದ ಆತ್ಮತೃಪ್ತಿ ಲಭಿಸುತ್ತದೆ. ಅಂತಹ ಸೇವಾ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಶ್ರೀಸತ್ಯಸಾಯಿ ಬಾಬಾರವರು … Continue reading ಸತ್ಯಸಾಯಿ ಟ್ರಸ್ಟ್ ಸೇವೆಗೆ ಹುಕ್ಕೇರಿ ಸ್ವಾಮೀಜಿ ಅಭಿನಂದನೆ