ಸರ್ವವ್ಯಾಪಿ ಕಾಡುತ್ತಿದೆ ಮಧುಮೇಹ ಕಾಯಿಲೆ…

CAMP-1

ಸುಗುಣೇಂದ್ರ ತೀರ್ಥ ಶ್ರೀಪಾದರ ಕಳವಳ

ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಮಧುಮೇಹ ಕಾಯಿಲೆ ಇದೆಯೆಂದರೆ ಆತ ಬಹುದೊಡ್ಡ ಶ್ರೀಮಂತ ಎಂಬ ಭಾವನೆ ಈ ಹಿಂದೆ ಇತ್ತು. ತನಗೆ ಡಯಾಬಿಟೀಸ್​ ಇದೆಯೆಂದು ಶ್ರೀಮಂತರೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೀಗ ಈ ಕಾಯಿಲೆ ಸರ್ವವ್ಯಾಪಿ ಆವರಿಸಿದೆ. ಚಿಕ್ಕ ಮಕ್ಕಳಿಗೂ ಅಂಟಿಕೊಳ್ಳುತ್ತಿದೆ. ಈ ರೋಗ ಇಲ್ಲದವರನ್ನು ಸನ್ಮಾನಿಸುವ ಸ್ಥಿತಿ ಬಂದಿದೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಕಳವಳ ವ್ಯಕ್ತಪಡಿಸಿದರು.

ಉಡುಪಿಯ ರಾಜಾಂಗಣದಲ್ಲಿ ಬಡಗುಬೆಟ್ಟು ಕ್ರೆಡಿಟ್​ ಕೋ-ಆಪ್​ ಸೊಸೈಟಿ, ಲಯನ್ಸ್​ ಕ್ಲಬ್​ ಉಡುಪಿ ಇಂದ್ರಾಳಿ, ಭಾರತ್​ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ಉಡುಪಿ ಜಿಲ್ಲೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್​ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ, ಇಂತಹ ಆರೋಗ್ಯ ತಪಾಸಣಾ ಶಿಬಿರಗಳ ಅಗತ್ಯತೆ ಹೆಚ್ಚಿದೆ ಎಂದು ಆಶೀರ್ವಚನ ನೀಡಿದರು.CAMP-2

ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಬಡಗುಬೆಟ್ಟು ಸೊಸೈಟಿಯ ಮುಖ್ಯಸ್ಥ ಜಯಕರ್​ ಶೆಟ್ಟಿ ಇಂದ್ರಾಳಿ ಫಲಪುಷ್ಪ ಸಮರ್ಪಣೆ ಮಾಡಿದರು.

ಮೆಡಿಕಲ್​ ಅಸೋಸಿಯೇಷನ್​ನ ಉಡುಪಿ ಅಧ್ಯಕ್ಷ ಸುರೇಶ್​ ಶೆಣೈ, ಡಾ. ಅರ್ಚನಾ ಭಕ್ತ, ಡಾ. ಶರತ್​ಚಂದ್ರ, ಡಾ. ಶಬರಿ, ಲಯನ್ಸ್​ ಕ್ಲಬ್​ ಉಡುಪಿಯ ಅಧ್ಯಕ್ಷ ಲಕ್ಷ್ಮೀಕಾಂತ್​ ಬೆಸ್ಕೂರು, ಬಡಗುಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್​ ಶೇರಿಗಾರ್​, ಜಿಲ್ಲಾ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ನ ಸುಮನಾ ಶೇಖರ್​, ಡಾ. ಲಾವಣ್ಯಾ, ರಾಘವೇಂದ್ರ ಪ್ರಭು ಕರ್ವಾಲು, ಪುತ್ತಿಗೆ ಮಠದ ದಿವಾನ ನಾಗರಾಜ್​ ಆಚಾರ್ಯ, ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​, ರಮಣ ಆಚಾರ್ಯ ಇತರರಿದ್ದರು.

ರತ್ನಾಕರ್​ ಶೆಟ್ಟಿಗಾರ್​ ಇಂದ್ರಾಳಿ ಕಾರ್ಯಕ್ರಮ ನಿರ್ವಹಿಸಿದರು. CAMP-4

ಕೆಎಂಸಿ ಮಣಿಪಾಲ್​, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಮಹಿಳಾ ವೈದ್ಯರ ಘಟಕ, ಇಂಡಿಯನ್​ ಡೆಂಟಲ್​ ಅಸೋಸಿಯೇಷನ್​. ಎ.ಜೆ. ಇನ್​ಸ್ಟಿಟ್ಯೂಟ್​ ಆಫ್ ಡೆಂಟಲ್​ ಸೈನ್ಸ್​ ಹಾಗೂ ಉಡುಪಿಯ ಎಲ್ಲ ತಜ್ಞವೈದ್ಯರ ಸಮ್ಮಿಲನದಲ್ಲಿ ಶಿಬಿರ ನಡೆಯಿತು. ನೂರಾರು ಜನರು ಶಿಬಿರದ ಪ್ರಯೋಜನ ಪಡೆದರು.

ಭಗವದ್ಗೀತೆ ಬರೆದರೆ, ಪಠಿಸಿದರೆ ಸಕಲ ರೋಗ ನಿವಾರಣೆ ಸಾಧ್ಯವಿದೆ. ಕಾಯಿಲೆ ವಾಸಿಯಾಗಲು ವೈದ್ಯರು ಔಷಧ ಕೊಟ್ಟರೆ, ಭಗವಂತನು ಭಗವದ್ಗೀತೆಯೆಂಬ ಆಧ್ಯಾತ್ಮಿಕ ಚಿಕಿತ್ಸೆ ನೀಡಿದ್ದಾನೆ. ರೋಗಿಗಳಿಗೆ ವೈದ್ಯರ ಮೇಲೆ ಅಪಾರ ನಂಬಿಕೆ ಇರುವುದರಿಂದ ತಮ್ಮ ಬಳಿ ಬರುವವರಿಗೆ ಭಗವದ್ಗೀತೆ ಪಠಿಸುವಂತೆ, ಬರೆಯುವಂತೆ ಪ್ರೇರೇಪಿಸಬೇಕು.
| ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ

Share This Article

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…

ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips

ಪ್ರಸ್ತುತ ಕಾರ್ಯನಿರತ ಜೀವನ ಮತ್ತು ಕಳಪೆ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ…