ವಿವೇಕರ ಚಿಂತನೆ ಯುವ ಪೀಳಿಗೆಗೆ ಸ್ಫೂರ್ತಿ

Wise thoughts inspire the younger generation

ಇಂಡಿ: ಸ್ವಾಮಿ ವಿವೇಕಾನಂದರ ಚಿಂತನೆಗಳು ಯುವಕರನ್ನು ಪ್ರೇರೇಪಿಸುತ್ತಿದ್ದು, ಹೊಸ ಶಕ್ತಿ ಮತ್ತು ಪ್ರಜ್ಞೆಯನ್ನು ತುಂಬುತ್ತಿವೆ. ಅವುಗಳನ್ನು ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದು ತಡವಲಗಾದ ಅಭಿನವ ರಾಚೋಟೇಶ್ವರ ಶ್ರೀಗಳು ಹೇಳಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ 162ನೇ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಮಂಜುನಾಥ ಜುನಗೊಂಡ ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ. ಆದ್ದರಿಂದ ಎಬಿವಿಪಿಯು ವೈಯಕ್ತಿಕ ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಲು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ನ್ಯಾಯವಾದಿ ಸತೀಶಚಂದ್ರ ಕುಲಕರ್ಣಿ ಮಾತನಾಡಿ, 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಮಾಡಿದ ಭಾಷಣದ ಮೂಲಕ ಸ್ವಾಮಿ ವಿವೇಕಾನಂದರು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರು ಎಂದರು.

ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ, ಭೀಮನಗೌಡ ಬಗಲಿ, ಗಣೇಶ ಹಂಜಗಿ, ಶಶಿಕುಮಾರ ಹಳ್ಳಯ್ಯ ಮಾತನಾಡಿದರು. ಭರತ ನಾಟ್ಯ ಮಾಡಿದ ತನುಶ್ರೀ ತೆಂಗಳೆ ಅವರನ್ನು ಸನ್ಮಾನಿಸಲಾಯಿತು.

TAGGED:
Share This Article

ಈ ಗಿಡಗಳನ್ನು ನಿಮ್ಮ ಮನೆಯ ಬಳಿ ಬೆಳೆಸಿದರೆ ಸಾಕು ಸೊಳ್ಳೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ! Mosquitoe

Mosquitoes : ಮಕ್ಕಳು ಮತ್ತು ವಯಸ್ಕರು ಸಾಮಾನ್ಯವಾಗಿ ಮನೆಯಲ್ಲಿ ಎದುರಿಸುವ ದೊಡ್ಡ ಕಿರಿಕಿರಿಗಳಲ್ಲಿ ಸೊಳ್ಳೆಗಳು ಕೂಡ…

ಬೇಸಿಗೆಯಲ್ಲಿ ಮಾವಿನಕಾಯಿ ತಿಂದು 4 ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ.. Mango Benefits

Mango Benefits: ಬೇಸಿಗೆ ಕಾಲ ಎಂದರೆ ಮಾವಿನಹಣ್ಣು ಕಾಲ.   ಮಾವಿನಹಣ್ಣು ರುಚಿ ಚೆನ್ನಾಗಿರುತ್ತದೆ ಆದರೆ ಹಸಿ…

ಬೇಸಿಗೆಯಲ್ಲಿ ಬಟ್ಟೆಗಳಿಂದ ಬೆವರಿನ ಕಲೆಗಳನ್ನು ತೆಗೆದುಹಾಕಲು ಇದು ಅದ್ಭುತ ಮಾರ್ಗಗಳು..sweat

sweat: ಬೇಸಿಗೆ ಕಾಲವು ಸುಡುವ ಬಿಸಿಲು, ತೇವಾಂಶವನ್ನು ತರುತ್ತದೆ ಮತ್ತು ಬೆವರು ಅತ್ಯಂತ ದೊಡ್ಡ ಸಮಸ್ಯೆಯಾಗಿದೆ.ನೀವು…