More

    ರಾಯಬಾಗ: ಮನೆ ಮಂಜೂರು ಮಾಡಲು ಒತ್ತಾಯ

    ರಾಯಬಾಗ: ತಾಲೂಕಿನ ಬಸ್ತವಾಡ ಗ್ರಾಮದ ಮನೆರಹಿತರಿಗೆ ಸರ್ಕಾರಿ ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ನಿವಾಸಿಗಳು ತಾಪಂ ಇಒ ಪ್ರಕಾಶ ವಡ್ಡರ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುಡಿಸಲು ಮುಕ್ತ ಗ್ರಾಮ ಮಾಡಲು ಅನೇಕ ಯೋಜನೆಗಳನ್ನು ಜಾರಿಗೆ ತಂದರೂ, ನಿಜವಾದ ಬಡವರಿಗೆ ಯೋಜನೆ ಲಾಭ ಮುಟ್ಟುತ್ತಿಲ್ಲ. ಮನೆ ಇಲ್ಲದೆ ತಾಡಪತ್ರೆ ಕಟ್ಟಿಕೊಂಡು ಬದುಕು ನಡೆಸುವಂತಹ ಚಿಂತಾಜನಕ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಮನೆರಹಿತ ನಿವಾಸಿಗಳಿಗೆ ಮನೆ ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಸಮಸ್ಯೆ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದರು. ಸುಬ್ಬವ್ವ ಹೆಗಡೆ, ರತ್ನವ್ವ ಹೆಗಡೆ, ಶಾಲವ್ವ ಹೆಗಡೆ, ದುಂಡಪ್ಪ ಹೆಗಡೆ, ಮಲ್ಲಪ್ಪ ಹೆಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts