ಭೀಕರ ಅಪಘಾತ, ಆರು ಮಂದಿ ಸ್ಥಳದಲ್ಲೇ ಸಾವು; ಮದುವೆ ಮುಗಿಸಿಕೊಂಡು ಮರಳುವಾಗ ಅವಘಡ..

ಮೈಸೂರು: ಮದುವೆಗೆ ಬಂದಿದ್ದವರು ಮರಳುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೈಸೂರು- ಮಡಿಕೇರಿ ಹೆದ್ದಾರಿಯ, ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದವರು ಕೊಡಗು ಜಿಲ್ಲೆಯವರಾಗಿದ್ದು, ಸಂಬಂಧಿಕರ ಮದುವೆಗಾಗಿ ಮೈಸೂರಿಗೆ ಆಗಮಿಸಿದ್ದರು. ಮದುವೆ ಮುಗಿಸಿಕೊಂಡು ಪಾಲಿಬೆಟ್ಟ ಕಡೆಗೆ ಬರುತ್ತಿದ್ದಾಗ ಅರಸು ಕಲ್ಲಹಳ್ಳಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ರಾಜೇಶ್, ಅನಿಲ್, ಸಂತೋಷ್, ವಿನುತ್, ದಯಾನಂದ್, ಬಾಬು ಸಾವಿಗೀಡಾಗಿದ್ದು, ಇನ್ನಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳನ್ನು ಹುಣಸೂರು ಸಾರ್ವಜನಿಕ … Continue reading ಭೀಕರ ಅಪಘಾತ, ಆರು ಮಂದಿ ಸ್ಥಳದಲ್ಲೇ ಸಾವು; ಮದುವೆ ಮುಗಿಸಿಕೊಂಡು ಮರಳುವಾಗ ಅವಘಡ..