ದಟ್ಟ ಮಂಜಿನಿಂದಾಗಿ ಸರಣಿ ಅಪಘಾತ; ಕೋಳಿಗಳಿಗೆ ಮುಗಿಬಿದ್ದ ಜನ

ಲಖನೌ: ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರಭಾರತದ ಹಲವೆಡೆ ದಟ್ಟವಾದ ಮಂಜು ಆವರಿಸಿದ್ದು, ರಸ್ತೆ ಸಂಚಾರ, ವಿಮಾನ ಮತ್ತು ರೈಲು ಸೇವೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿವೆ. ಗೋಚರತೆ ಬಹುತೇಕ ಶೂನ್ಯವಾಗಿದೆ. ರಸ್ತೆಗಳೆಲ್ಲಾ ದಟ್ಟ ಮಂಜಿನಿಂದ ಕೂಡಿದ್ದು ಸರಣಿ ಅಪಘಾತಗಳು ಸಂಭವಿಸುತ್ತಿವೆ. ಇದೀಗ ಉತ್ತರಪ್ರದೇಶ ಆಗ್ರಾ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಇದರಲ್ಲಿ ಕೋಳಿ ಸಾಗಿಸುತ್ತಿದ್ದ ಟೆಂಪೋ ಒಂದು ಅಪಘಾತಕ್ಕಿಡಾಗಿದೆ. ಈ ವಿಚಾರವನ್ನು ತಿಳಿದ ಸ್ಥಳೀಯರು ಕ್ಷಣಾರ್ಧದಲ್ಲೇ ಕೋಳಿಗಳನ್ನು ಹೊತ್ತೊಯ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ … Continue reading ದಟ್ಟ ಮಂಜಿನಿಂದಾಗಿ ಸರಣಿ ಅಪಘಾತ; ಕೋಳಿಗಳಿಗೆ ಮುಗಿಬಿದ್ದ ಜನ