1 ಗಂಟೆ ನಿರಂತರವಾಗಿ ಸುರಿದ ಭಾರೀ ಮಳೆಗೆ ಕೆರೆಯಂತಾದ ಬಸ್​ ನಿಲ್ದಾಣ!ಬಸ್ಸಿಗಾಗಿ ಪರದಾಡಿದ ಪ್ರಯಾಣಿಕರು

ಮಂಡ್ಯ: ಸತತ ಒಂದು ಗಂಟೆಗಳ ಕಾಲ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಕೆ.ಆರ್.ಪೇಟೆ KSRTC ಬಸ್ ನಿಲ್ದಾಣ ತುಂಬೆಲ್ಲಾ ನೀರು ತುಂಬಿಕೊಂಡು ಕೆರೆಯಂತಾಗಿದೆ. ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ಬಸ್​ ಸಂಚಾರಕ್ಕೆ ಅಡ್ಡಿಯಾಗಿದ್ದು, ಮಳೆನೀರು ತುಂಬಿಕೊಂಡಿದ್ದರಿಂದ ಬಸ್​ ಹತ್ತಲು ಜನರು ಪರದಾಡುವಂತಾಯಿತು. ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರೀ ಮಳೆಯಾಗಿದೆ. ಕೆ.ಆರ್​.ಪೇಟೆ ನಿಲ್ದಾಣ ಮಾತ್ರ ಕೆಲಕಾಲ ಬಸ್​ ನಿಲ್ದಾಣವೋ ಅಥವಾ ಕೆರೆಯೋ ಎಂಬಂತೆ ಭಾಸವಾಗಿತ್ತು. (ದಿಗ್ವಿಜಯ ನ್ಯೂಸ್​) ಮನಕಲಕುವ ದೃಶ್ಯ: ಗಂಭೀರ ಗಾಯಗೊಂಡ ತಾಯಿಯನ್ನು ಬಿಟ್ಟು … Continue reading 1 ಗಂಟೆ ನಿರಂತರವಾಗಿ ಸುರಿದ ಭಾರೀ ಮಳೆಗೆ ಕೆರೆಯಂತಾದ ಬಸ್​ ನಿಲ್ದಾಣ!ಬಸ್ಸಿಗಾಗಿ ಪರದಾಡಿದ ಪ್ರಯಾಣಿಕರು