ಹಾಲು ತರಲು ಹೋಗುತ್ತಿದ್ದವನ ಎದುರಿಗೆ ಬಂತು ಮೃತ್ಯು!

ಬಾಗಲಕೋಟೆ: ಮನೆಗೆ ಹಾಲು ತರಲೆಂದು ಹೊರ ಹೋದವ ಮಾರ್ಗಮಧ್ಯೆ ಜಲಸಮಾಧಿಯಾದ ಘಟನೆ ಶನಿವಾರ ಬೆಳಗ್ಗೆ ಮುಧೋಳ ತಾಲೂಕಿನಲ್ಲಿ ಸಂಭವಿಸಿದೆ. ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಭಾರೀ ಪ್ರಮಾಣ ಮಳೆಯಾಗಿದ್ದು, ಜನರ ಅಕ್ಷರಶಃ ಮೂರಾಬಟ್ಟೆಯಾಗಿದೆ. ಈ ಮಳೆ ಅವಾಂತರಕ್ಕೆ ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದ ನಿವಾಸಿ ಸಂತೋಷ ಅಡವಿ(34) ಬಲಿಯಾಗಿದ್ದಾರೆ. ಇವರು ಬೆಳಗ್ಗೆ ಹಾಲು ತರಲೆಂದು ಬೈಕ್​ನಲ್ಲಿ ಹೊರಟಿದ್ದರು. ಒಂಟಗೋಡಿ ಕ್ರಾಸ್ ಬಳಿ ಮಳೆಗೆ ತುಂಬಿ ಹರಿಯುತ್ತಿದ್ದ ಯಾದವಾಡ ಹಳ್ಳದಲ್ಲಿ ಕೊಚ್ಚಿಹೋದ ಸಂತೋಷ ಸ್ಥಳದಲ್ಲೇ ಅಸುನೀಗಿದರು. ಮೃತರು ಮುಧೋಳ ಡಿಸಿಸಿ … Continue reading ಹಾಲು ತರಲು ಹೋಗುತ್ತಿದ್ದವನ ಎದುರಿಗೆ ಬಂತು ಮೃತ್ಯು!