More

    ಮದ್ಯದ ಅಮಲಿನಲ್ಲಿ ಅಣ್ಣನ ಸ್ನೇಹಿತನ ಕೊಂದ ತಮ್ಮ:ಕಬ್ಬಿಣದ ರಾಡ್‌ನಿಂದ ಹತ್ಯೆ

    ಬೆಂಗಳೂರು: ರಾತ್ರಿ ವೇಳೆ ಅಣ್ಣನ ಮನೆಗೆ ಬಂದು ಮಲಗುತ್ತಿದ್ದ ಅಣ್ಣನ ಸ್ನೇಹಿತನ ಜತೆಗೆ ಮದ್ಯದ ಅಮಲಿನಲ್ಲಿ ಜಗಳ ಮಾಡಿದ ತಮ್ಮ ಆತನ ತಲೆಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಪ್ರಕರಣ ಸುಬ್ರಮಣ್ಯಪುರದಲ್ಲಿ ನಡೆದಿದೆ.
    ದೊಡ್ಡಕಲ್ಲಸಂದ್ರ ಮೂಲದ ಗಣೇಶ್(೪೩) ಹತ್ಯೆಯಾದ ದುರ್ದೈವಿ. ಸೋಮವಾರ ಮುಂಜಾನೆ ೧ ಗಂಟೆ ಸುಮಾರಿಗೆ ಶಾರದಾನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿ ನಾರಾಯಣ ನಾಯಕ್(೫೦) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆಯಾದ ಗಣೇಶ್ ಮತ್ತು ಆರೋಪಿಯ ಅಣ್ಣನಾದ ಮಲ್ಲೇಶ್ ನಾಯಕ್ ಸ್ನೇಹಿತರು. ಗಣೇಶ್, ಹೋಂ ನರ್ಸಿಂಗ್ ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಆರು ತಿಂಗಳಿಂದ ಕೌಟುಂಬಿಕ ಕಲಹದಿಂದ ಪತ್ನಿ ಹಾಗೂ ಮಕ್ಕಳಿಂದ ದೂರುವಾಗಿದ್ದ. ಮದ್ಯ ವ್ಯಸನಿಯಾಗಿದ್ದ ಗಣೇಶ್ ತನ್ನ ಸ್ನೇಹಿತ ಮಲ್ಲೇಶ್ ನಾಯಕ್‌ನ ಶಾರದಾನಗರದ ಮನೆಯಲ್ಲಿ ರಾತ್ರಿ ಮಲಗುತ್ತಿದ್ದ. ದಾಂಪತ್ಯದಲ್ಲಿ ಕಲಹದಿಂದ ಮಲ್ಲೇಶ್ ಕೂಡ ಪತ್ನಿ ಮತ್ತು ಮಕ್ಕಳು ಪ್ರತ್ಯೇಕವಾಗಿ ನೆಲೆಸಿದ್ದರು. ಹೀಗಾಗಿ ಮಲ್ಲೇಶ್ ಮತ್ತು ಗಣೇಶ್ ಮನೆಯಲ್ಲಿ ಮದ್ಯದ ಪಾರ್ಟಿ ಮಾಡಿಕೊಂಡು ಅಲ್ಲೇ ಮಲಗುತ್ತಿದ್ದರು.
    ಮದ್ಯದ ಅಮಲಿನಲ್ಲಿ ರಾಡ್‌ನಿಂದ ಹೊಡೆದು ಹತ್ಯೆ:
    ಆರೋಪಿ ನಾರಾಯಣ ನಾಯಕ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ತಾತಗುಣಿಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾನೆ. ಶಾರಾದನಗರದಲ್ಲಿ ಸ್ವಂತ ಮನೆಯಿದ್ದು, ಆಗಾಗ ಆ ಮನೆಯಲ್ಲಿ ರಾತ್ರಿ ವೇಳೆ ಮಲಗುತ್ತಿದ್ದ. ಅಣ್ಣ ಮನೆಯಲ್ಲಿ ಮದ್ಯದ ಪಾರ್ಟಿ ಮಾಡಿಕೊಂಡು ಇರುತ್ತಿದ್ದ ಗಣೇಶ್‌ಗೆ ಮನೆಗೆ ಬಾರದಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಭಾನುವಾರ ರಾತ್ರಿ ಗಣೇಶ್ ಮದ್ಯ ಸೇವಿಸಿ ಮಲ್ಲೇಶ್ ಮನೆಯಲ್ಲಿ ಮಲಗಿದ್ದ. ಈ ವೇಳೆ ಮಲ್ಲೇಶ್ ಬೇರೊಂದು ಮನೆಯಲ್ಲಿ ಮಲಗಿದ್ದ. ಮತ್ತೊಂದೆಡೆ ಕಂಠಪೂರ್ತಿ ಮದ್ಯ ಸೇವಿಸಿಕೊಂಡು ಮನೆಗೆ ಬಂದಿದ್ದ ನಾರಾಯಣ ನಾಯಕ್, ಮಲ್ಲೇಶ್ ಜತೆಗೆ ತೆಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರು ನಡುವೆ ಗಲಾಟೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ನಾರಾಯಣ ನಾಯಕ್ ಕಬ್ಬಿಣದ ರಾಡ್‌ನಿಂದ ಗಣೇಶ್ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್ ತೀವ್ರ ರಕ್ತಸ್ರಾವಾಗಿ ಸ್ಥಳದಲ್ಲೇ ಮೃತಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ನಾರಾಯಣ್ ನಾಯಕ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts