ಎಚ್​ಡಿಕೆ-ಸಿಪಿವೈ ಮೇಲಾಟ; ತಹಶೀಲ್ದಾರ್​​ಗಳಿಗೆ ಪೀಕಲಾಟ, ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ವರ್ಗಾವಣೆ ಹುಡುಗಾಟ..

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್​ ಅವರ ಪ್ರತಿಷ್ಠೆಯ ಮೇಲಾಟದಿಂದಾಗಿ ಚನ್ನಪಟ್ಟಣದ ತಹಶೀಲ್ದಾರ್​ಗಳಿಗೆ ಪೀಕಲಾಟ ಎಂಬಂತಾಗಿದೆ. ತಮ್ಮವರೇ ತಹಶೀಲ್ದಾರ್ ಇರಬೇಕು ಎಂಬ ಇವರಿಬ್ಬರ ಜಟಾಪಟಿಯಿಂದಾಗಿ ಮೂರೇ ವಾರಗಳಲ್ಲಿ ಮೇಲಿಂದ ಮೇಲೆ ತಹಶೀಲ್ದಾರ್​ಗಳ ವರ್ಗಾವಣೆ ಆಗಿದ್ದು, ದಿನ ಬೆಳಗಾಗುವುದರೊಳಗೆ ತಹಶೀಲ್ದಾರ್​ ಬದಲಾವಣೆ ಆಗುತ್ತಿರುವಂಥ ಬೆಳವಣಿಗೆಗಳು ಆಗುತ್ತಿವೆ. ಕೆಲವೇ ದಿನಗಳ ಹಿಂದೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದ ಎಚ್​ಡಿಕೆ ಆಪ್ತ ನಾಗೇಶ್ ಅವರನ್ನು ಸಿಪಿವೈ ವರ್ಗಾವಣೆ ಮಾಡಿಸಿದ್ದರು ಎನ್ನಲಾಗಿದ್ದು, ಆ ಸ್ಥಾನಕ್ಕೆ ಅವರ ಆಪ್ತ ಸುದರ್ಶನ್​ … Continue reading ಎಚ್​ಡಿಕೆ-ಸಿಪಿವೈ ಮೇಲಾಟ; ತಹಶೀಲ್ದಾರ್​​ಗಳಿಗೆ ಪೀಕಲಾಟ, ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ವರ್ಗಾವಣೆ ಹುಡುಗಾಟ..