ಕನ್ನಡ ಭಾಷೆ ಬಳಸಲು ಆಗ್ರಹಿಸಿ ಮನವಿ

Havinala Shree Dutt Sugar Factory, Kannada Language, Chadchan, Marathi Language, Jaya Karnataka, Kannada Pro Organization, Tehsildar Sanjay Ingale, Land, Water, Electricity, Sugarcane,

ಚಡಚಣ: ಸಮೀಪದ ಹಾವಿನಾಳ ಗ್ರಾಮದ ಶ್ರೀ ದತ್ ಸಕ್ಕರೆ ಕಾರ್ಖಾನೆಯ ಆಡಳಿತದಲ್ಲಿ ಮರಾಠಿ ಭಾಷೆ ಬಳಸಲಾಗುತ್ತಿದೆ. ಕೂಡಲೇ ಆ ಪದ್ಧತಿ ನಿಲ್ಲಿಸಿ, ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಯ ಕರ್ನಾಟಕ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಸಂಜಯ ಇಂಗಳೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

blank

ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಸಂಗಮೇಶ ದಾಶ್ಯಾಳ ಮಾತನಾಡಿ, ಕನ್ನಡ ನೆಲ, ಜಲ, ವಿದ್ಯುತ್, ಕಬ್ಬು ಪಡೆದು ಕಾರ್ಖಾನೆ ನಡೆಸುತ್ತಿರುವ ಶ್ರೀ ದತ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸಂಪೂರ್ಣವಾಗಿ ಮರಾಠಿ ಭಾಷೆಯಲ್ಲಿ ಆಡಳಿತ ನಡೆಸುವದರೊಂದಿಗೆ ಶೇ.99 ರಷ್ಟು ಕಾರ್ಮಿಕರನ್ನು ಮರಾಠಿಗರನ್ನೇ ನೇಮಿಸಿಕೊಂಡಿದೆ ಎಂದು ಆರೋಪಿಸಿದರು.

ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ರವಿ ಶಿಂಧೆ ಮಾತನಾಡಿ, ಶ್ರೀ ದತ್ ಸಕ್ಕರೆ ಕಾರ್ಖಾನೆಯ ಸಮಗ್ರ ವಹಿವಾಟು, ಪತ್ರ ವ್ಯವಹಾರ, ರೈತರೊಂದಿಗೆ ಸಭೆಯನ್ನು ಕನ್ನಡ ಭಾಷೆಯಲ್ಲಿ ನಡೆಸಬೇಕು. ಒಂದು ತಿಂಗಳಿನಲ್ಲಿ ಕಾರ್ಖಾನೆಯ ವ್ಯವಹಾರ ಹಾಗೂ ನಾಮ ಫಲಕಗಳು ಕನ್ನಡಮಯವಾಗಿ ಪರಿವರ್ತನೆಯಾಗದಿದ್ದರೆ ಕಾರ್ಖಾನೆಯ ಎದುರು ಧರಣಿ ಸತ್ಯಾಗ್ರಹ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.

ನಂತರ ಕಾರ್ಖಾನೆಗೆ ತೆರಳಿದ ಕಾರ್ಯಕರ್ತರು ಕಾರ್ಖಾನೆಯ ಆಡಳಿತ ವ್ಯವಸ್ಥಾಪಕರಿಗೆ ಮನವಿ ನೀಡಿ, 15 ದಿನದೊಳಗೆ ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಿದರು.

blank

ಚೇತನ ಮಠ, ಚಿದಾನಂದ ಶಿಂಧೆ, ಓಂಕಾರ ಮಠ, ದತ್ತು ಶಿಂಧೆ, ವಿಕಾಸ ಮಲ್ಲಾಡಿ, ದಯಾನಂದ ಶಿಂಧೆ, ಅರ್ಜುನ ಕ್ಷತ್ರಿ, ಸುನೀಲ ಕ್ಷತ್ರಿ, ಸುನೀಲ ಧೋತ್ರೆ, ಸಚಿನ ಕಟ್ಟಿಮನಿ, ಪ್ರದೀಪ ನಾವಿ, ರಘುವೀರ ಮೋರೆ ಇತರರಿದ್ದರು.

Share This Article

ಮೇಕೆ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳೇನು ಗೊತ್ತಾ?Goat Milk Health Benefits

Goat Milk Health Benefits :  ಸಾಮಾನ್ಯವಾಗಿ ನಾವು ಹಸುವಿನ ಹಾಲು ಅಥವಾ ಎಮ್ಮೆ ಹಾಲು…

ಪೋಷಕರೇ ಹುಷಾರ್‌! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips

Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ…

ಮಿದುಳಿನ ಆರೋಗ್ಯ ರಕ್ಷಣೆಗೆ ನಾವೇನು ಮಾಡಬೇಕು?

ಇಂದು ಕೃತಕ ಬುದ್ಧಿಮತ್ತೆ ಕೂಡ ನಮ್ಮ ಕೈಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಮಿದುಳಿನ ಆರೋಗ್ಯ ದಿನೇ…