ಹಾವೇರಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಯುವಕ ಮಂಡಳಿ ವತಿಯಿಂದ ನಗರದ ನೇತಾಜಿ ಸುಭಾಷ್ ವೃತ್ತದಲ್ಲಿ ಶುಕ್ರವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನವನ್ನು ಆಚರಿಸಲಾಯಿತು.
ಮಂಡಳಿಯ ಗೌರವಾಧ್ಯಕ್ಷ ಸಂತೋಷ ಆಲದಕಟ್ಟಿ ಮಾತನಾಡಿ, ನಗರಕ್ಕೆ ಸುಭಾಷ್ ಚಂದ್ರ ಬೋಸ್ ಅವರು ಭೇಟಿ ನೀಡಿದ್ದು ನಮಗೆಲ್ಲ ಅತ್ಯಂತ ಹೆಮ್ಮೆಯ ವಿಷಯ. ಸ್ವಾತಂತ್ರೃ ಹೋರಾಟದ ಸಮಯದಲ್ಲಿ ದೇಶಾದ್ಯಂತ ಸಂಚರಿಸಿ, ಜನರನ್ನು ಬ್ರಿಟೀಷರ ವಿರುದ್ಧ ಹೋರಾಡಲು ಪ್ರೋತ್ಸಾಹಿಸಲು ದೇಶದ ಉದ್ದಗಲಕ್ಕೂ ಸಂಚರಿಸಿದರು. ಇಂಡಿಯನ್ ನ್ಯಾಷನಲ್ ಆರ್ಮಿ ಮೂಲಕ ಭಾರತದಲ್ಲಿ ಬೇರು ಇದ್ದ ಬ್ರಿಟಿಷರ ಮೇಲೆ ದಾಳಿ ಮಾಡಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದರು ಎಂದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿಕೊಂಡ ನಂತರ ಹಾವೇರಿ ನಗರಕ್ಕೆ ಸುಭಾಷ್ ಚಂದ್ರ ಬೋಸ್ ಅವರು ಆಗಮಿಸಿ ಸಭೆ ನಡೆಸಿದ್ದರು. ಬ್ರಿಟೀಷರ ವಿರುದ್ಧ ಹೋರಾಡಲು ಸ್ಪೂರ್ತಿಯನ್ನು ತುಂಬಿದ್ದರು. ನಗರದ ಸುಭಾಷ್ ವೃತದಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಪ್ರತಿಮೆ ನಿರ್ಮಿಸಲು ನಗರಸಭೆಗೆ ಈಗಾಗಲೇ ಮನವಿ ಸಲ್ಲಿಸಿಲಾಗಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಸುಭಾಷ್ ವೃತ್ತದ ಮಾರ್ಗಕ್ಕೆ ಸುಭಾಷ್ ಚಂದ್ರ ಬೋಸ್ ಮಾರ್ಗ ಎಂದು ನಾಮಕರಣ ಮಾಡಬೇಕೆಂದು ನಗರಸಭೆಗೆ ಸೂಚಿಸಿದರು.
ನಗರ ಸಭೆ ಉಪಾಧ್ಯಕ್ಷ ಮಲ್ಲಣ್ಣ ಸಾತೇನಹಳ್ಳಿ, ಮಂಡಳಿಯ ಅಧ್ಯಕ್ಷ ನಿಖಿಲ್ ಡೊಗ್ಗಳ್ಳಿ, ನಿರಂಜನ ಹೇರೂರು, ರಮೇಶ ಆನವಟ್ಟಿ, ಪ್ರಸನ್ನ ಹಿರೇಮಠ, ಕಿರಣ ಕೊಳ್ಳಿ, ಗುರಣ್ಣ ಸೀಮಿಕೇರಿ, ಗಂಗಾಧರ ಕುಲಕರ್ಣಿ, ನವೀನ ವರದಿ, ರತನ್ ಕಾಶಪ್ಪನವರ, ರೋಷನ್ ಮಲ್ಲಾಡದ, ಗೌಸ್ ಕತಿಬ್, ಮಂಜುನಾಥ ಹರಿಹರ, ಕುಮಾರ ಸ್ವಾದಿ, ವಿಕಾಸ ಉಪ್ಪಿನ್, ಕುಶಾಲ ಕನವಳ್ಳಿ, ಇತರರು ಇದ್ದರು.