More

    ಹೆಂಡತಿ, ಮಕ್ಕಳ ಭೇಟಿಗೆ ಅವಕಾಶ ಮಾಡಿಕೊಡಿ; ನೊಂದ ಗಂಡನಿಂದ ಪೊಲೀಸರಲ್ಲಿ ಮನವಿ

    ಹಾವೇರಿ: ನನ್ನ ಹೆಂಡತಿಯ ತವರೂರಿನ ಕೆಲವರು ನನ್ನ ಹೆಂಡತಿಯನ್ನು ನನ್ನಿಂದ ದೂರ ಮಾಡಿ ಆಕೆಯನ್ನೂ ನನ್ನ ಮಕ್ಕಳನ್ನೂ ಭೇಟಿಯಾಗದಂತೆ ಕಿರುಕುಳ ನೀಡುತ್ತಿದ್ದಾರೆ. ದಯವಿಟ್ಟು ಪೊಲೀಸರು ನನ್ನ ಹೆಂಡಿ ಮತ್ತು ಮಕ್ಕಳ ಭೇಟಿಗೆ ಅವಕಾಶ ಮಾಡಿಕೊಡಬೇಕು ಎಂದು ನೊಂದ ಪತಿ, ಶಿವಮೊಗ್ಗ ಜಿಲ್ಲೆ ಸಾಗರದ ಆರ್.ಎಸ್.ದಿನೇಶಕುಮಾರ ರಾಯಕೋಟಿ ಮನವಿ ಮಾಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಶಕಗಳ ಹಿಂದೆ ಅಕ್ಕಿಆಲೂರಿನ ಗೀತಾ ಎಂಬುವರೊಂದಿಗೆ ನಾನು ವಿವಾಹವಾಗಿದ್ದೆ. ಅಕ್ಕಿಆಲೂರಿನ ಕೆಲ ವ್ಯಕ್ತಿಗಳು ಇಲ್ಲಸಲ್ಲದ ಕಥೆ ಹೇಳಿ ನನ್ನ ಹೆಂಡತಿ- ಮಕ್ಕಳಿಂದ ನನ್ನನ್ನು ದೂರ ಮಾಡಿದ್ದಾರೆ. ಅವರನ್ನು ಭೇಟಿ ಮಾಡಳು ಬಿಡುತ್ತಿಲ್ಲ. ಈ ಕುರಿತು ಹಲವರಲ್ಲಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈಗಲಾದರೂ ನನ್ನ ಪತ್ನಿ ಹಾಗೂ ಮಕ್ಕಳ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ಪೊಲೀಸರಲ್ಲಿ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts