ಭಾರತೀಯ ಕ್ರಿಕೆಟ್​ನ ಸೂಪರ್​ಸ್ಟಾರ್​ ಸಂಸ್ಕೃತಿಗೆ ಹರ್ಭಜನ್ ಸಿಂಗ್​​ ಟೀಕೆ

blank

ನವದೆಹಲಿ: ಭಾರತೀಯ ಕ್ರಿಕೆಟ್​ ತಂಡದಲ್ಲಿರುವ “ಸೂಪರ್​ಸ್ಟಾರ್​ ಸಂಸ್ಕೃತಿ’ಯನ್ನು ಟೀಕಿಸಿರುವ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​, ಇದನ್ನು ಕೊನೆಗೊಳಿಸಿ, ನಿರ್ವಹಣೆಯ ಆಧಾರದಲ್ಲಿ ಆಟಗಾರರನ್ನು ತಂಡಕ್ಕೆ ಆರಿಸುವಂತೆ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.

“ಭಾರತ ತಂಡದಲ್ಲಿ ಸೂಪರ್​ಸ್ಟಾರ್​ ಸಂಸ್ಕೃತಿ ಬೆಳೆದಿದೆ. ನಮಗೆ ಸೂಪರ್​ಸ್ಟಾರ್​ಗಳು ಅಗತ್ಯವಿಲ್ಲ. ಉತ್ತಮ ನಿರ್ವಹಣೆ ತೋರುವವರಷ್ಟೇ ಬೇಕು. ಸೂಪರ್​ಸ್ಟಾರ್​ ಸಂಸ್ಕೃತಿಯಿಂದ ತಂಡ ಬೆಳವಣಿಗೆ ಕಾಣುತ್ತಿಲ್ಲ. ಸೂಪರ್​ಸ್ಟಾರ್​ ಆಗಲು ಬಯಸುವವರು ಮನೆಯಲ್ಲಿರಬಹುದು ಮತ್ತು ಅಲ್ಲೇ ಕ್ರಿಕೆಟ್​ ಆಡಬಹುದು’ ಎಂದು ಹರ್ಭಜನ್​ ತನ್ನ ಯುಟ್ಯೂಬ್​ ಚಾನಲ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜಸ್​ಪ್ರೀತ್​ ಬುಮ್ರಾ ಭಾರತ ತಂಡದಲ್ಲಿರದಿದ್ದರೆ ಬಾರ್ಡರ್​-ಗಾವಸ್ಕರ್​ ಟ್ರೋಫಿಯಲ್ಲಿ 0-5ರಿಂದ ಸೋಲಬೇಕಾಗುತ್ತಿತ್ತು ಎಂದೂ ಅವರು ಹೇಳಿದ್ದಾರೆ.

“ಮುಂದಿನ ಇಂಗ್ಲೆಂಡ್​ ಪ್ರವಾಸದ ಟೆಸ್ಟ್​ ಸರಣಿಗೆ ಯಾರು ಹೋಗಬೇಕು, ಯಾರು ಹೋಗಬಾರದು ಎಂಬುದಕ್ಕಿಂತ, ಉತ್ತಮ ನಿರ್ವಹಣೆ ತೋರುವವರನ್ನಷ್ಟೇ ಆರಿಸಬೇಕು. ಆಟಗಾರರನ್ನು ಅವರ ವರ್ಚಸ್ಸಿನ ಆಧಾರದಲ್ಲಿ ತಂಡಕ್ಕೆ ಆರಿಸಬಾರದು. ಅದೇ ಮುಖ್ಯವಾದರೆ ಕಪಿಲ್​ ದೇವ್ ಸರ್​ ಮತ್ತು ಅನಿಲ್​ ಭಾಯ್​ (ಕುಂಬ್ಳೆ) ಕೂಡ ತಂಡದಲ್ಲಿ ಸ್ಥಾನ ಪಡೆಯಲಿ’ ಎಂದಿದ್ದಾರೆ.

ಟ್ರೋಫಿ ವಿತರಣೆಗೆ ಆಹ್ವಾನಿಸದ ಬಗ್ಗೆ ಗಾವಸ್ಕರ್​ ಬೇಸರ; ಕ್ರಿಕೆಟ್​ ಆಸ್ಟ್ರೇಲಿಯಾ ಸ್ಪಷ್ಟನೆ ಹೀಗಿದೆ…

TAGGED:
Share This Article

ಮಕ್ಕಳು ಪ್ರತಿದಿನ ತಿನ್ನಲೇ ಬೇಕಾದ ಹಣ್ಣುಗಳಿವು..ಕಾರಣ ಹೀಗಿದೆ | Fruits

Fruits: ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಹಣ್ಣುಗಳು ಬಹಳ ಪ್ರಯೋಜನಕಾರಿ. ಹಣ್ಣುಗಳಲ್ಲಿ…

ನೀವು ಕೂಡ ಇದೇ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈರುಳ್ಳಿ ತಿನ್ನಲೇಬೇಡಿ.. onion

onion : ಈರುಳ್ಳಿಯಿಂದ ಹಲವು ಪ್ರಯೋಜನಗಳಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.…

ನೀವು ಹೆಚ್ಚಾಗಿ ಹೈ ಹೀಲ್ಸ್ ಧರಿಸುತ್ತೀರಾ? ಹುಷಾರಾಗಿರಿ.. heels

heels : ಮಹಿಳೆಯರು ತಮ್ಮ ಬಟ್ಟೆಗಳಿಗೆ ಹೊಂದಿಕೆಯಾಗುವಂತೆ ಹೈ ಹೀಲ್ಸ್ ಧರಿಸಿ ಸ್ಟೈಲಿಶ್ ಆಗಿ ಕಾಣುವುದು…