ಸ್ವಾರ್ಥ ಬಿಡಿ, ನ್ಯಾಯಕ್ಕಾಗಿ ಹೋರಾಡಲು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ ಸಲಹೆ

blank

ಹರಪನಹಳ್ಳಿ: ಸ್ವಾರ್ಥ ಮನೋಭಾವ ಬಿಟ್ಟು ನ್ಯಾಯಕ್ಕಾಗಿ ಹೋರಾಡಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ ಹೇಳಿದರು.

blank

ಪಟ್ಟಣದ ವಕೀಲರ ಸಂಘದಲ್ಲಿ ಸೋಮವಾರ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ನಿಕಟ ಪೂರ್ವ ಪದಾಧಿಕಾರಿಗಳಿಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ವಿಷಯವನ್ನು ನಾವು ಗಮನಿಸುವಾಗ ಪ್ರತ್ಯಕ್ಷವಾಗಿ ಕಂಡು ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು. ಹೊಗಳಿಕೆ-ತೆಗಳಿಕೆಯನ್ನು ಸಮನಾಗಿ ಕೊಂಡೊಯ್ಯಬೇಕು. ಭೂತಕಾಲದ ಬಗ್ಗೆ ಚಿಂತಿಸದೆ, ವರ್ತಮಾನದ ಕಡೆ ಹೋಗಬೇಕಾಗಿದೆ ಎಂದರು.

ಸಿವಿಲ್ ನ್ಯಾಯಾಧೀಶೆ ಫಕ್ಕಿರವ್ವ ಕೆಳಗೆರೆ ಮಾತನಾಡಿ, ನ್ಯಾಯದಲ್ಲಿ ಪ್ರಕರಣಗಳು ಹೆಚ್ಚಿಗೆ ಇರುವುದರಿಂದ ಸಮಯ ಬಹಳ ಬೇಕಾಗುತ್ತದೆ. ಆದ್ದರಿಂದ ನ್ಯಾಯವಾದಿಗಳು ಸಹಕರಿಸಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಕೆ.ಜಗದಪ್ಪ, ನಿಕಟಪೂರ್ವ ಅಧ್ಯಕ್ಷ ಕೆ.ಚಂದ್ರೇಗೌಡ. ಮಾತನಾಡಿದರು.

ಹಿರಿಯ ವಕೀಲರಾದ ಕೃಷ್ಣಮೂರ್ತಿ, ಕೆ.ಎಂ.ಚಂದ್ರಮೌಳಿ, ಟಿ.ವೆಂಕಟೇಶ್, ಆರ್.ರೇವನಗೌಡ್ರು, ಬಿ.ಹಾಲೇಶ್, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್ ಗೌಡ, ಸರ್ಕಾರಿ ಅಭಿಯೋಜಕ ಎನ್.ಮೀನಾಕ್ಷಿ, ಸಂಘದ ಡಿ.ವಾಸುದೇವ, ಎಸ್.ಜಿ.ತಿಪ್ಪೇಸ್ವಾಮಿ, ಎಂ.ನಾಗಂದ್ರಪ್ಪ, ಹುಲಿಯಪ್ಪ, ಎಂ.ಮೃತ್ಯುಂಜಯ್ಯ, ಕೆ.ಎಂ.ಕೋಟ್ರಯ್ಯ, ಸಿ.ರಾಜಪ್ಪ, ಕೆ.ಎಸ್.ಮಂಜ್ಯಾನಾಯ್ಕ, ಎಂ.ರೇವಣಸಿದ್ದಪ್ಪ, ಕೆ.ಕೋಟ್ರೇಶ್, ಎಂ.ಮಂಜುನಾಥ್, ಇತರರು ಇದ್ದರು.

Share This Article
blank

ಬಿಸಾಡುವ ಮುನ್ನ ತಿಳಿಯಿರಿ Watermelon Seeds ಪವರ್​​: ಇದರಲ್ಲಿದೆ 5 ನಂಬಲಾಗದ ಆರೋಗ್ಯ ಪ್ರಯೋಜನೆಗಳು

Watermelon Seeds: ಬೇಸಿಗೆಯಲ್ಲಿ ಬಿಸಿಲು ಜೋರಾದ ತಕ್ಷಣ ದೇಹವನ್ನು ತಂಪಾಗಿಸಲು ನಾವು ಹೆಚ್ಚಾಗಿ ಕಲ್ಲಂಗಡಿಯನ್ನು ಆಶ್ರಯಿಸುತ್ತೇವೆ.…

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

blank