ಹಂಪಿ ಶ್ರೀ ವಿರೂಪಾಕ್ಷನ ಕಂಡು ಧನ್ಯರಾದ ಭಕ್ತರು, ಹೊರಗೆ ನಿಂತು ಕೈಮುಗಿದ ಮಕ್ಕಳು, ವೃದ್ಧರು

ಹೊಸಪೇಟೆ: ಎರಡೂವರೆ ತಿಂಗಳಿಂದ ಕಾಯುತ್ತಿದ್ದ ಭಕ್ತರಿಗೆ ಸೋಮವಾರ ಹಂಪಿ ವಿರೂಪಾಕ್ಷ ದೇವಸ್ಥಾನ ಬಾಗಿಲು ತೆರೆಯಿತು. ಸಾರಿಗೆ ಸೌಕರ್ಯ ಇಲ್ಲದ್ದರಿಂದ ಭಕ್ತರು ಸ್ವಂತ ವಾಹನದಲ್ಲಿ ಬಂದು ದರ್ಶನ ಪಡೆದು, ದೇಶವನ್ನು ಕರೊನಾದಿಂದ ಮುಕ್ತಿಗೊಳಿಸು ಎಂದು ಪ್ರಾರ್ಥಿಸಿದರು. ಮೊದಲ ದಿನ ಭಕ್ತರ ಸಂಖ್ಯೆ ಕಡಿಮೆಯಿದ್ದು, ಬರಿಗೈಲಿ ಪ್ರಾರ್ಥಿಸಿ ತೆರಳಿದರು. ಮಾಸ್ಕ್ ಹಾಕಿದ್ದವರಿಗೆ ಮಾತ್ರ ಸ್ಯಾನಿಟೈಸರ್ ಹಾಕಿ ದರ್ಶನಕ್ಕೆ ಕಳುಹಿಸಲಾಯಿತು. ಮಕ್ಕಳು, ವೃದ್ಧರು ದೇವಸ್ಥಾನದ ಹೊರಗಡೆಯಿಂದ ಕೈಮುಗಿದರು. ಬಿಷ್ಟಪ್ಪಯ್ಯ ಗೋಪುರದಿಂದ ಪ್ರವೇಶಿಸಿ, ಉತ್ತರ ಬಾಗಿಲಲ್ಲಿ ಭಕ್ತರು ನಿರ್ಗಮಿಸಿದರು. ದೈಹಿಕ ಅಂತರ ಕಾಯ್ದುಕೊಳ್ಳಲು … Continue reading ಹಂಪಿ ಶ್ರೀ ವಿರೂಪಾಕ್ಷನ ಕಂಡು ಧನ್ಯರಾದ ಭಕ್ತರು, ಹೊರಗೆ ನಿಂತು ಕೈಮುಗಿದ ಮಕ್ಕಳು, ವೃದ್ಧರು