ಗುಕೇಶ್​ಗೆ ತಮಿಳುನಾಡು ಸರ್ಕಾರದಿಂದ ಭರ್ಜರಿ ಬಹುಮಾನ; ಕರ್ನಾಟಕದಿಂದ ಅಭಿನಂದನೆ

blank

ಚೆನ್ನೈ: ಅತಿಕಿರಿಯ ಚೆಸ್​ ವಿಶ್ವ ಚಾಂಪಿಯನ್​ ಡಿ. ಗುಕೇಶ್​ಗೆ ತವರಿನ ತಮಿಳುನಾಡು ಸರ್ಕಾರದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಶುಕ್ರವಾರ 5 ಕೋಟಿ ರೂ. ಬಹುಮಾನ ಪ್ರಕಟಿಸಿದ್ದಾರೆ. ಈ ಬಹುಮಾನದೊಂದಿಗೆ ಗುಕೇಶ್​ರನ್ನು ಗೌರವಿಸಲು ಖುಷಿಯಾಗುತ್ತಿದೆ. ಈ ಐತಿಹಾಸಿಕ ಸಾಧನೆ ದೇಶಕ್ಕೆ ಅಪಾರ ಹೆಮ್ಮೆ ಮತ್ತು ಸಂತಸ ತಂದಿದೆ ಎಂದು ಸ್ಟಾಲಿನ್​ ಎಕ್ಸ್​ನಲ್ಲಿ ತಿಳಿಸಿದ್ದಾರೆ. ವಿಶ್ವ ಚಾಂಪಿಯನ್​ಷಿಪ್​ ಸಿದ್ಧತೆಗಾಗಿಯೂ ತಮಿಳುನಾಡು ಸರ್ಕಾರ ಗುಕೇಶ್​ಗೆ 85 ಲಕ್ಷ ರೂ. ನೀಡಿ ನೆರವಾಗಿತ್ತು.

ಕರ್ನಾಟಕ ಸರ್ಕಾರ ಅಭಿನಂದನೆ
ಬೆಳಗಾವಿ: ನೂತನ ಚೆಸ್​ ವಿಶ್ವ ಚಾಂಪಿಯನ್​ ಗುಕೇಶ್​ಗೆ ಕರ್ನಾಟಕ ಸರ್ಕಾರ ಅಭಿನಂದನೆ ಸಲ್ಲಿಸಿದೆ. ಶುಕ್ರವಾರ ವಿಧಾನಸಭೆ ಕಲಾಪದ ಕೊನೆಯಲ್ಲಿ ಸ್ಪೀಕರ್​ ಯುಟಿ ಖಾದರ್​, ಗುಕೇಶ್​ ಸಾಧನೆಯ ಬಗ್ಗೆ ಸದನದ ಗಮನಸೆಳೆದಾಗ ಸಚಿವ ಕೃಷ್ಣ ಬೈರೇಗೌಡ, ಸರ್ಕಾರದ ಪರವಾಗಿ ಗುಕೇಶ್​ಗೆ ಅಭಿನಂದನೆ ಸಲ್ಲಿಸಲು ಸಂತೋಷವಾಗುತ್ತಿದೆ ಎಂದರು.

ತಡವಾಗಿ ಬಂದ ಯಶಸ್ವಿ ಜೈಸ್ವಾಲ್​; ಹೋಟೆಲ್​ನಲ್ಲೇ ಬಿಟ್ಟುಹೋದ ಟೀಮ್​ ಇಂಡಿಯಾ ಬಸ್​!

Share This Article

ಬೇಸಿಗೆಯಲ್ಲಿ ಗುಂಗುರು ಕೂದಲಿನ ಆರೈಕೆ ಮಾಡುವುದು ಹೇಗೆ ಗೊತ್ತಾ? curly hair

curly hair: ಗುಂಗುರು ಕೂದಲು ತುಂಬಾ ಸುಂದರವಾಗಿ ಕಾಣುತ್ತದೆ, ಇದಕ್ಕೆ ಸರಿಯಾದ ಆರೈಕೆಯ ಅಗತ್ಯವಿರುತ್ತದೆ. ನೀವು…

ಅಪ್ಪಿತಪ್ಪಿಯೂ ಈ ದಿನ ಪೊರಕೆಯನ್ನು ಖರೀದಿಸಬೇಡಿ! ಖಂಡಿತ ತೊಂದರೆಗೆ ಸಿಲುಕುತ್ತೀರಿ.. broom

broom: ಹಿಂದೂಗಳು ಪೊರಕೆಯನ್ನು ಲಕ್ಷ್ಮಿ ದೇವಿಯ ಸಾಕಾರವೆಂದು ಪರಿಗಣಿಸುತ್ತಾರೆ. ಭಕ್ತರು ಲಕ್ಷ್ಮಿ ದೇವಿಯು ಪೊರಕೆಗಳಲ್ಲಿ ವಾಸಿಸುತ್ತಾಳೆ…

ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ‘ಲೈಂಗಿಕ ಕೊಠಡಿಗಳು’! Prison

Prison: ಇಟಲಿ ಸರ್ಕಾರ ಒಂದು ವಿನೂತನ ನಿರ್ಧಾರ ತೆಗೆದುಕೊಂಡಿದೆ. ಕೈದಿಗಳ ಗೌಪ್ಯತೆಯ ಹಕ್ಕುಗಳನ್ನು ಗೌರವಿಸಿ, ಇಟಲಿ…