ಕೇಂದ್ರ ಬಜೆಟ್​ 2020: ಸೋಲಾರ್​ ಪಂಪ್​ಗಳಿಗೆ ಹೆಚ್ಚಿದ ಒತ್ತು, ಬರಡು ಭೂಮಿಯಲ್ಲಿ ಸೋಲಾರ್​ ಆದಾಯ

blank

ನವದೆಹಲಿ: ದೇಶದಲ್ಲಿ ಇಂಧನಗಳ ಬಳಕೆ ಹೆಚ್ಚಿದ್ದು, ಸೋಲಾರ್​ ಅಳವಡಿಕೆ ಅವಶ್ಯವಾಗಿರುವುದರಿಂದ ಅದರತ್ತ ಹೆಚ್ಚಿನ ಒತ್ತು ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ವೇಳೆಯಲ್ಲಿ ಹೇಳಿದ್ದಾರೆ. ದೇಶದ 15 ಲಕ್ಷ ರೈತರಿಗೆ ಸೋಲಾರ್​ ಪಂಪ್​ ಅಳವಡಿಕೆಗೆ ಹಣ ನೀಡುವುದಾಗಿ ಅವರು ತಿಳಿಸಿದ್ದಾರೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್​ ಉರ್ಜಾ ಸುರಕ್ಷಾ ಉತ್ಥಾನ್​ ಮಹಾಭಿಯಾನ (ಪಿಎಂ ಕೆಯುಎಸ್​ಯುಎಮ್​​) ಯೋಜನೆಯನ್ನು ಆರಂಭಿಸಲಾಗಿತ್ತು. 34,422 ಕೋಟಿ ಮೊತ್ತದ ಈ ಯೋಜನೆಯಲ್ಲಿ ಈಗಾಗಲೇ ಒಟ್ಟು 34,422 ಕೋಟಿ ರೈತರನ್ನು ಇಂಧನ ಮುಕ್ತ ಕೃಷಿಯತ್ತ ತರಲಾಗಿದೆ. ಬರಡು ಭೂಮಿಯಲ್ಲಿ ಸೋಲಾರ್​ ಅಳವಡಿಕೆ ಮಾಡುವ ಮೂಲಕ ಆದಾಯ ತೆಗೆಯಲು ಸಹಾಯ ಮಾಡಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.

ಪಿಎಂ ಕೆಯುಎಸ್​ಯುಎಮ್​​ ಯೋಜನೆಯನ್ನು ಮೂರು ಘಟಕಗಳಾಗಿ ಕರೆಯಲಾಗಿದೆ. ಮೊದಲನೆಯ ಘಟಕದಲ್ಲಿ ಗ್ರಿಡ್​ಗಳಿಂದ ಸಂಪರ್ಕಿತವಾದ ವಿಕೇಂದ್ರೀಕೃತ ಗ್ರೌಂಡ್​ಗಳಲ್ಲಿ 10,000 ಮೆಗಾವ್ಯಾಟ್​ ಸೌರಶಕ್ತಿ ತಯಾರಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಎರಡನೆಯ ಘಟಕದ ಅನುಸಾರ 17.5 ಲಕ್ಷ ಸ್ಟಾಂಡ್​ ಅಲೋನ್​ ಸೋಲಾರ್​ ಕೃಷಿ ಪಂಪ್​ಗಳು ಮತ್ತು ಮೂರನೆಯ ಘಟಕದಲ್ಲಿ 10 ಲಕ್ಷ ಗ್ರಿಡ್​ ಕನೆಕ್ಟೆಡ್​ ಸೋಲಾರ್​ ಕೃಷಿ ಪಂಪ್​ಗಳನ್ನು ನಿರ್ಮಿಸುವುದಾಗಿ ಬಜೆಟ್​ನಲ್ಲಿ ತಿಳಿಸಲಾಗಿದೆ. ಮುರು ಘಟಕಗಳಿಂದ ಒಟ್ಟಾಗಿ 2022ರ ವೇಳೆಗೆ 25,750 ಮೆಗಾ ವ್ಯಾಟ್​ ವಿದ್ಯುತ್​ ತಯಾರಿಸುವುದಾಗಿ ಸಚಿವೆ ತಿಳಿಸಿದ್ದಾರೆ.

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…