ಗೊರೇಬಾಳ: ಸಮೀಪದ ಗೊರೇಬಾಳ ಕ್ಯಾಂಪಿನ ಶಿವರಾಮಕೃಷ್ಣ ಸಾಸಲಮರಿ ಎಂಬುವವರ ಜಮೀನಿನಲ್ಲಿ ನಿರ್ಮಿಸಿರುವ ಕೆರೆಯಲ್ಲಿ ದೊಡ್ಡದಾದ ಮೊಸಳೆ ಪ್ರತ್ಯಕ್ಷವಾಗಿ ಜನರಲ್ಲಿ ಭಯದ ವಾತಾವರಣ ಮೂಡಿಸಿದೆ.
ಕೆರೆಯ ದಂಡೆಯ ಮೇಲೆ ಮೊಸಳೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳು ನೀರು ಕುಡಿಯಲು ಕೆರೆಗೆ ಬರುವುದನ್ನು ನಿಲ್ಲಿಸಲಾಗಿದೆ. ಕೆರೆ ಪಕ್ಕದ ಗೊರೇಬಾಳ-ಸಾಸಲಮರಿ ರಸ್ತೆಯಲ್ಲಿ ಜನ ಓಡಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ.
‘ಖಾಸಗಿ ಕೆರೆಯಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಗ್ರಾಪಂನಿಂದ ಪತ್ರ ಬರೆಯಲಾಗಿದೆ’ ಎಂದು ಗೊರೇಬಾಳ ಗ್ರಾಪಂ ಪಿಡಿಒ ವೀರೇಶ ಹಿರೇಮಠ ತಿಳಿಸಿದ್ದಾರೆ.