’10 ತಿಂಗಳ ಬಳಿಕ ಆರೋಪವೇಕೆ’?: ಗೂಳಿಹಟ್ಟಿ ಶೇಖರ್ ವೈರಲ್ ಆಡಿಯೋ ಕುರಿತು ಸ್ಪಷ್ಟನೆ ಕೊಟ್ಟ ಆರ್‌ಎಸ್‌ಎಸ್‌ ನಾ. ತಿಪ್ಪೇಸ್ವಾಮಿ

ಬೆಂಗಳೂರು: “ಪರಿಶಿಷ್ಠ ಜಾತಿಯವನು ಎಂಬ ಕಾರಣಕ್ಕೆ ನಾಗಪುರದ ಹೆಡಗೇವಾರ್ ವಸ್ತು ಸಂಗ್ರಹಾಲಯದ ಪ್ರವೇಶ ನಿರಾಕರಿಸಿದ್ದಾರೆ” ಎಂದು ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ಆರ್‌ಎಸ್‌ಎಸ್‌ ಮುಖಂಡ ಬಿ.ಎಲ್. ಸಂತೋಷ್ ಅವರಲ್ಲಿ ಮನವಿ ಮಾಡಿಕೊಂಡಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಈ ಕುರಿತು ಆರ್‌ಎಸ್‌ಎಸ್‌ನ ನಾ. ತಿಪ್ಪೇಸ್ವಾಮಿ ಸ್ಪಷ್ಟನೆ ನೀಡಿದ್ದು, ಗೂಳಿಹಟ್ಟಿ ಶೇಖರ್ ಆರೋಪ ನಿರಾಧಾರ, ಅವರು ಹೇಳಿದ ಯಾವುದೇ ಘಟನೆ ನಡೆದಿಲ್ಲ. … Continue reading ’10 ತಿಂಗಳ ಬಳಿಕ ಆರೋಪವೇಕೆ’?: ಗೂಳಿಹಟ್ಟಿ ಶೇಖರ್ ವೈರಲ್ ಆಡಿಯೋ ಕುರಿತು ಸ್ಪಷ್ಟನೆ ಕೊಟ್ಟ ಆರ್‌ಎಸ್‌ಎಸ್‌ ನಾ. ತಿಪ್ಪೇಸ್ವಾಮಿ