ಯೋಜನೆಗಳ ಸದುಪಯೋಗ ಪಡೆಯಿರಿ, ಗೋಮಾಂತಕ ಸಮಾಜದ ಸಭೆಯಲ್ಲಿ ಸಲಹೆ

blank

ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪೋರ್ಟಲ್, ಸ್ಟಾರ್ಟ್ಅಪ್ ಮತ್ತು ಮುದ್ರಾ ಯೋಜನೆಗಳಲ್ಲಿ ನೋಂದಣಿ ಮಾಡಿಕೊಂಡು ಯುವಕ ಮತ್ತು ಯುವತಿಯರು ನೌಕರಿಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕೆವೈಎನ್ಡಿಆರ್ವೈಎಲ್ (ಐಬಿಎಂ ಸ್ಪಿನ್) ನಿರ್ದೇಶಕ ಗಜಾನನ ಹೊನ್ನಾವರ ಹೇಳಿದರು.

blank

ಇಲ್ಲಿಯ ಹೊಸೂರ ಉತ್ತರ ಕನ್ನಡ ವೈಶ್ಯ ಸಮಾಜ ಹಾಲ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹುಬ್ಬಳ್ಳಿ ಧಾರವಾಡ ಗೋಮಾಂತಕ ಸಮಾಜ ಸೇವಾ ಸಂಘದ 43ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಉದ್ಯೋಗಕ್ಕೆ ಒಳ್ಳೆಯ ಮತ್ತು ವಿಪುಲ ಅವಕಾಶಗಳಿದ್ದು, ವೆಬ್ ಸೈಟ್ ನಲ್ಲಿ ಹುಡುಕಿಕೊಳ್ಳಬಹುದು ಎಂದು ತಿಳಿಸಿದರು.

ಗೋವಾದ ಗೋಮಾಂತಕ ಮರಾಠಾ ಸಮಾಜದ ಕಾರ್ಯದರ್ಶಿ ಉತ್ಕರ್ಷ ಬನಸ್ತಕರ್ ಮಾತನಾಡಿ, ಮಹಿಳೆಯರು ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕೆಂದರು.

ರಣಜಿ ಮತ್ತು ರಾಯಲ್ ಚಾಲೆಂರ್ಜಸ್ ತಂಡದ ಪರ ಆಡಿದ್ದ ರಾಜು ಭಟ್ಕಳ್ ಮಾತನಾಡಿ, ಕ್ರಿಕೆಟ್ ನಲ್ಲಿ ಆಸಕ್ತಿ ಇರುವವರಿಗೆ ಸೂಕ್ತ ತರಬೇತಿ ನೀಡುವ ಭರವಸೆ ನೀಡಿದರು.

ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾ ಪುರಸ್ಕಾರ, ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಲಾಯಿತು. ಸಮಾಜದ ರಘುವೀರ ಅಂಕೋಲೆಕರ, ಪ್ರಮೀಳಾ ಕಿನ್ನರಕರ ಮತ್ತು ದತ್ತಾ ಬಾಂದೆಕರ್ ಅವರನ್ನು ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಮಿತಾ ಸುದರ್ಶನ್ ದೇವಳಿ ಮತ್ತು ಪ್ರಕಾಶ್ ಗೋಕರ್ಣರನ್ನು ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಕೃಷ್ಣಕಾಂತ ಅಂಕೋಲೆಕರ ಅಧ್ಯಕ್ಷತೆ ವಹಿಸಿದ್ದರು. ಕವಿತಾ ನಾಯ್ಕ ವಂದಿಸಿದರು.

Share This Article

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…

ಕಂಕುಳಲ್ಲಿರುವ ಕಪ್ಪು ಕಲೆ ಕಡಿಮೆಯಾಗಲು ಏನು ಮಾಡಬೇಕು? underarms

underarms: ಅನೇಕ ಹುಡುಗಿಯರು ಕಂಕುಳಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು  ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು…