ಆಕ್ರಮಣಕಾರರನ್ನು ವೈಭವಿಕರಿಸುವುದು ದೇಶದ್ರೋಹ; ಔರಂಗಜೇಬನ ಸಮಾಧಿ ವಿವಾದದ ಮಧ್ಯೆ ಯೋಗಿ ಆದಿತ್ಯನಾಥ್​ ಹೇಳಿಕೆ | Controversy

blank

Controversy : ಐತಿಹಾಸಿಕ ಆಕ್ರಮಣಕಾರರನ್ನು ವೈಭವಿಕರಿಸುವವರ ವಿರುದ್ಧ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ​​ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

blank

ನಮ್ಮ ನಾಗರಿಕತೆಯ ಮೇಲೆ ದಾಳಿ ಮಾಡಿದ, ನಮ್ಮ ಮಹಿಳೆಯರ ಮೇಲೆ ಮತ್ತು ನಮ್ಮ ನಂಬಿಕೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಆಚರಿಸುವವರ ವಿರುದ್ಧ ಮುಖ್ಯಮಂತ್ರಿ ಔರಂಗಜೇಬನನ್ನು ನೇರವಾಗಿ ಹೆಸರಿಸದೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಬಿರಿಯಾನಿ ತಿನ್ನಲು ಹೋಗಿ ಸಿಕ್ಕಿಬಿದ್ದ ಖೋಟಾ ನೋಟು ಬಾಯ್ಸ್​; ಆರೋಪಿಗಳಿಗೆ ಫುಲ್​ ಮೀಲ್ಸ್​ ಕೊಟ್ಟ ಪೊಲೀಸರು

ಆಕ್ರಮಣಕಾರರನ್ನು ವೈಭವೀಕರಿಸುವುದು ಎಂದರೆ ದೇಶದ್ರೋಹದ ಬೇರುಗಳನ್ನು ಬಲಪಡಿಸುವುದು. ನಮ್ಮ ಮಹಾನ್ ಪೂರ್ವಜರನ್ನು ಅವಮಾನಿಸುವವರನ್ನು ಮತ್ತು ನಮ್ಮ ನಾಗರಿಕತೆಯ ಮೇಲೆ ದಾಳಿ ಮಾಡಿದ, ನಮ್ಮ ಮಹಿಳೆಯರನ್ನು ಉಲ್ಲಂಘಿಸಿದ ಮತ್ತು ನಮ್ಮ ನಂಬಿಕೆಯ ಮೇಲೆ ಹಲ್ಲೆ ಮಾಡಿದವರನ್ನು ಹೊಗಳುವವರನ್ನು ನವ ಭಾರತ ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಬಹ್ರೈಚ್‌ನಲ್ಲಿ ಗುರುವಾರ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಆದಿತ್ಯನಾಥ್ ಮಾತನಾಡಿದರು.

ಇಡೀ ಜಗತ್ತು ಭಾರತ ಶ್ರೀಮಂತ ಪರಂಪರೆಯನ್ನು ಗುರುತಿಸುತ್ತಿರುವಾಗ ಪ್ರತಿಯೊಬ್ಬ ನಾಗರಿಕ ಕರ್ತವ್ಯ ಎಂದರೆ ನಮ್ಮ ಮಹಾನ್​ ನಾಯಕರನ್ನು ಗೌರಿಸುವುದು. ನಮ್ಮ ಗುರುತನ್ನು ಅಳಿಸಲು ಪ್ರಯತ್ನಿಸಿದವರನ್ನು ಹೊಗಳುವುದಲ್ಲ ಎಂದಿದ್ದಾರೆ.

ಇದನ್ನೂ ಓದಿ:ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಕಟ್ಟೆಪೂಜೆ

ಇನ್ನು ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿರುವ ಮೊಘಲ್ ದೊರೆ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂಬ ಬೇಡಿಕೆಗಳು ಹೆಚ್ಚುತ್ತಿರುವ ಮಧ್ಯೆ ಬಿಜೆಪಿ ನಾಯಕನ ಈ ಹೇಳಿಕೆ ಹೊರಬಿದ್ದಿದೆ.(ಏಜೆನ್ಸೀಸ್​)

ಚಾಹಲ್​-ಧನಶ್ರೀಗೆ ವಿಚ್ಛೇದನ ಆದೇಶ ನೀಡಿದ ಮುಂಬೈ ಕೋರ್ಟ್​; ಜೀವನಾಂಶ ಕೊಟ್ಟಿದ್ದೆಷ್ಟು? | Divorce

ದೇಹದಲ್ಲಿ ಈ ಲಕ್ಷಣಗಳು ಗೋಚರಿಸಿದರೆ ನಿಮ್ಮ ಕಿಡ್ನಿಯಲ್ಲಿ ಕಲ್ಲಿವೆ ಎಂದರ್ಥ; ತಕ್ಷಣ ಈ ಕೆಲಸ ಮಾಡಿ | Kidney Stones

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank