ಶಸ್ತ್ರಾಸ್ತ್ರ ತಯಾರಿಕೇಲಿ ಭಾರತವನ್ನ ಆತ್ಮನಿರ್ಭರ್ ಮಾಡೋ ಯತ್ನದಲ್ಲಿದ್ರು: ಜನರಲ್​ ರಾವತ್​​ಗೆ ಸಿಎಂ ಬೊಮ್ಮಾಯಿ ಶ್ರದ್ಧಾಂಜಲಿ

ಬೆಂಗಳೂರು: ಭಾರತವು ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಹಂಬಲವಿದ್ದ ದಿವಂಗತ ಜನರಲ್​​ ಬಿಪಿನ್ ರಾವತ್ ಅವರು ಸ್ಥಳೀಯವಾಗಿ ರಕ್ಷಣಾ ಉಪಕರಣಗಳ ತಯಾರಿಕೆಯನ್ನು ಪ್ರಾರಂಭಿಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಡಿಆರ್​​ಡಿಒ ಹಾಗೂ ಹಲವಾರು ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಅವರ ಪ್ರೇರಣೆಯೂ ಇದೆ. ಹೊಸ ಆವಿಷ್ಕಾರ, ಉಪಕರಣಗಳನ್ನು ತಯಾರು ಮಾಡಿ ಸೇನೆಗಳಿಗೆ ಸರಬರಾಜು ಮಾಡುವುದಷ್ಟೇ ಅಲ್ಲ, ಖಾಸಗಿ ವಲಯದಲ್ಲಿಯೂ ಉತ್ಪಾದನೆ ಮಾಡಲು ಜ್ಞಾನವನ್ನು ವರ್ಗಾಯಿಸಿ ಬಹಳ ಪ್ರೋತ್ಸಾಹ ನೀಡಿದ್ದರು ಎಂದರು. … Continue reading ಶಸ್ತ್ರಾಸ್ತ್ರ ತಯಾರಿಕೇಲಿ ಭಾರತವನ್ನ ಆತ್ಮನಿರ್ಭರ್ ಮಾಡೋ ಯತ್ನದಲ್ಲಿದ್ರು: ಜನರಲ್​ ರಾವತ್​​ಗೆ ಸಿಎಂ ಬೊಮ್ಮಾಯಿ ಶ್ರದ್ಧಾಂಜಲಿ