ಅಂಜನಾದ್ರಿ ಕೇಸರಿಮಯ ಹನುಮಭಕ್ತರಿಂದ ಮಾಲೆ ವಿಸರ್ಜನೆ

Anjanadhri

ವಿ.ಕೆ.ರವೀಂದ್ರ ಕೊಪ್ಪಳ
ಎಲ್ಲಿ ನೋಡಿದರೂ ಕೇಸರಿ ವಸ್ತ್ರ ಧರಿಸಿದ ಮಾಲಾಧಾರಿ ಗಳು. ಮರ್ಯಾದಾ ಪುರುಷೋತ್ತಮ ಶ್ರೀರಾಮ, ಆತನ ಬಂಟ ಹನುಮನ ಜಪ. ಕಡಿದಾದ ಬೆಟ್ಟದಲ್ಲಿ ಕೊರೆವ ಚಳಿಯನ್ನೂ ಲೆಕ್ಕಿಸದೆ ದರ್ಶನ ಪಡೆದ ಭಕ್ತ ವೃಂದ. ಹನುಮ ಮಾಲೆ ವಿಸರ್ಜನೆ ಹಿನ್ನೆಲೆಯಲ್ಲಿ ಆಂಜನೇಯ ಜನಿಸಿದ ಅಂಜನಾದ್ರಿ ಬೆಟ್ಟದಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳಿವು. ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರದಿಂದ ಪಾದಯಾತ್ರೆ ಹಾಗೂ ವಾಹನಗಳಲ್ಲಿ ಆಗಮಿಸಿದ್ದ ಲಕ್ಷಾಂತರ ಭಕ್ತರು ಗುರುವಾರ ರಾತ್ರಿಯಿಂದಲೇ ಹನುಮ ದರ್ಶನಕ್ಕೆ ಸಾಲುಗಟ್ಟಿದ್ದರು. ಶುಕ್ರವಾರ ಬೆಳಗ್ಗೆ 3 ಗಂಟೆಗೆ ಹೋಮ ಪೂರ್ಣಗೊಳ್ಳುತ್ತಲೇ ವ್ರತಧಾರಿಗಳು 575 ಮೆಟ್ಟಿಲು ಹತ್ತಿ ಮಾಲೆ ವಿಸರ್ಜಿಸಿ ಪುನೀತರಾದರು.

ದೂರದಲ್ಲೇ ವಾಹನ ನಿಲುಗಡೆ: ಅಂಜನಾದ್ರಿ ಬೆಟ್ಟದಿಂದ 5 ಕಿ.ಮೀ.ದೂರದಲ್ಲೇ ವಾಹನಗಳ ರ್ಪಾಂಗ್ ವ್ಯವಸ್ಥೆ ಮಾಡಿದ್ದರಿಂದ ಸಂಚಾರ ಸಿಕ್ಕು ಕಾಣಲಿಲ್ಲ. ಸಾರಿಗೆ ಬಸ್ ಮೂಲಕ ಬೆಟ್ಟದ ಕೆಳಭಾಗದವರೆಗೆ ಭಕ್ತರನ್ನು ಉಚಿತವಾಗಿ ಕರೆದೊಯ್ಯಲಾಯಿತು. ಬೆಟ್ಟದ ಕೆಳಭಾಗದ ಪ್ರವೇಶ ದ್ವಾರದಲ್ಲಿ ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು. ಹನುಮ ವೇಷಧಾರಿಗಳು, ಪುಟಾಣಿಗಳು ಮೆಟ್ಟಿಲು ಹತ್ತಿ ಭಕ್ತಿ ಮೆರೆದರು. ಬೆಟ್ಟದ ಮೇಲ್ಭಾಗ, ಕೆಳ ಭಾಗದ ವೇದ ಪಾಠ ಶಾಲೆ ಹತ್ತಿರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಭಿಮಾನಿಗಳ ಪೈಪೋಟಿ: ಮಾಲಾಧಾರಿಗಳು ಹನುಮ, ಶ್ರೀರಾಮರ ಭಾವಚಿತ್ರ ಹಿಡಿದು ಜಪಗೈದರು. ಕೆಲವರು ನಟ ದಿ.ಪುನೀತ್ ರಾಜ್​ಕುಮಾರ್ ಹಾಗೂ ದರ್ಶನ್ ಭಾವಚಿತ್ರದೊಂದಿಗೆ ಬೆಟ್ಟ ಹತ್ತಿದರು. ಇನ್ನೂ ಕೆಲವರು ಲಾರೆನ್ಸ್ ಬಿಷ್ಣೋಯ್, ಶಾಸಕ ಬಸನಗೌಡ ಯತ್ನಾಳ ಫೋಟೋ ಹಿಡಿದಿದ್ದು ಕಂಡುಬಂತು.

ಸಂಕೀರ್ತನ ಯಾತ್ರೆ: ಹಿಂದುಪರ ಸಂಘಟನೆಗಳು ಶಾಸಕ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಗಂಗಾವತಿ ಯಲ್ಲಿ ಸಂಕೀರ್ತನ ಯಾತ್ರೆ ನಡೆಸಿ ಧರ್ಮ ಜಾಗೃತಿ ಮೂಡಿಸಿದವು. ಮುಸ್ಲಿಮರು ಮಾಲಾಧಾರಿಗಳಿಗೆ ಪುಷ್ಪ ಅರ್ಪಿಸಿ ಶುಭ ಕೋರಿ ಭಾವೈಕ್ಯ ಮೆರೆದರು. ಬಳಿಕ ಧರ್ಮ ಸಭೆ ನಡೆಸಿ ಯಾತ್ರಿಗಳು ಅಂಜನಾದ್ರಿಯತ್ತ ಹೆಜ್ಜೆ ಹಾಕಿದರು.

Border-Gavaskar ಟ್ರೋಫಿಯ ಮೂರನೇ ಪಂದ್ಯಕ್ಕೆ ಎದುರಾಯ್ತು ಮಳೆ ಭೀತಿ; ಗಾಬಾ ಪಿಚ್​ ಯಾರಿಗೆ ಸಹಕಾರಿ, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

Rohit Sharma ಕ್ರಿಕೆಟ್​ನಲ್ಲಿ ಹೆಚ್ಚು ದಿನ ಆಡುವ ಸಾಧ್ಯತೆಗಳಿಲ್ಲ; ಹಿಟ್​ಮ್ಯಾನ್​ ಕುರಿತು ಶಾಕಿಂಗ್​​ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

Share This Article

ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …