ಅಂಜನಾದ್ರಿ ಹುಂಡೀಲಿ 28.35 ಲಕ್ಷ ರೂ. ಸಂಗ್ರಹ

Hundi money

ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿಯ ಐತಿಹಾಸಿಕ ಅಂಜನಾದ್ರಿ ಬೆಟ್ಟದ ದೇವಾಲಯ ಹುಂಡಿಯಲ್ಲಿ 28.35ಲಕ್ಷ ರೂ. ಸಂಗ್ರಹವಾಗಿದ್ದು, ವಿದೇಶಿ ನೋಟು ಮತ್ತು ನಾಣ್ಯಗಳು ದೊರೆತಿವೆ.

ಮುಜರಾಯಿ ಇಲಾಖೆ ನಿರ್ವಹಣೆಯಲ್ಲಿರುವ ದೇವಾಲಯದ ಹುಂಡಿಯನ್ನು ಭದ್ರತಾ ಹಿತದೃಷ್ಟಿಯಿಂದ ತಿಂಗಳಿಗೊಮ್ಮೆ ತೆರೆಯಲಾಗುತ್ತಿದೆ. ಈ ಬಾರಿ 46 ದಿನಗಳ ನಂತರ ತೆರೆಯಲಾಗಿದ್ದು, 28,35,647 ರೂ. ಸಂಗ್ರಹವಾಗಿದ್ದು, ನೇಪಾಳ, ಕೆನಡಾ ದೇಶದ ನಾಣ್ಯ ಮತ್ತು ನೋಟಗಳಿವೆ.

ಪೊಲೀಸ್ ಬಂದೋಬಸ್ತ್ ಮತ್ತು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಶುಕ್ರವಾರ ಹುಂಡಿ ಹಣ ಎಣಿಸಲಾಗಿದ್ದು, ವಿಡಿಯೋ ಚಿತ್ರೀಕರಣ ಮಾಡಲಾಯಿತು. ಹಣವನ್ನು ಸಣಾಪುರದ ಪಿಕೆಜಿಬಿಯಲ್ಲಿ ಜಮೆ ಮಾಡಲಾಯಿತು. ಕಳೆದ ಬಾರಿ ಹುಂಡಿ ಹಣ ಎಣಿಸಿದಾಗ ರೂ.61.64 ಲಕ್ಷ ರೂ. ಸಂಗ್ರಹವಾಗಿತ್ತು. ದೇವಾಲಯದಲ್ಲಿನ ವ್ಯವಸ್ಥೆ ಮತ್ತು ಭಕ್ತರ ಅನುಕೂಲತೆಗಳ ಬಗ್ಗೆ ದೇವಾಲಯ ಇಒ ಪ್ರಕಾಶರಾವ್ ಮಾಹಿತಿ ನೀಡಿದರು.

ಶಿರಸ್ತೇದಾರರಾದ ರವಿಕುಮಾರ್ ನಾಯಕವಾಡಿ, ಸುನೀಲ್‌ಕುಮಾರ್ ಕುಲ್ಕರ್ಣಿ, ಮಂಜುನಾಥ, ಕವಿತಾ, ಮಹಾಲಕ್ಷ್ಮೀ, ಪೂಜಾ, ಸಂಗೀತಾ, ಆರಾಧನೆ ಸಮಿತಿ ಸದಸ್ಯರಾದ ವಿಶ್ವನಾಥ ಮಾಲಿ ಪಾಟೀಲ್, ಜೋಗದ ರವಿನಾಯ್ಕ, ಬ್ಯಾಂಕ್ ಮ್ಯಾನೇಜರ್ ನವೀನ್ ಕುಮಾರ, ದೇವಾಲಯ ಸಮಿತಿ ವ್ಯವಸ್ಥಾಪಕ ಎಂ.ವೆಂಕಟೇಶ ಸೇರಿ ಮಹಿಳಾ ಸ್ವಯಂ ಸೇವಾ ಸಂಘದ ಸದಸ್ಯರಿದ್ದರು.

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…