ಗಂಗೆ-ಗೌರಿ ಹಬ್ಬ ಸಂಭ್ರಮ

blank

ಕಿಕ್ಕೇರಿ: ಹೋಬಳಿಯಾದ್ಯಂತ ಶುಕ್ರವಾರ ಗಂಗೆ-ಗೌರಿ ಹಬ್ಬದ ಸಂಭ್ರಮವನ್ನು ಸಡಗರದಿಂದ ಆಚರಣೆ ಮಾಡಿದರು.

ಕೋವಿಡ್, ಬರಗಾಲದ ಕರಿನೆರಳಿನಿಂದ ಮುಕ್ತವಾಗಿ ಪ್ರಸಕ್ತ ವರ್ಷ ಸಮೃದ್ಧಿಯಾಗಿ ಮಳೆ ಬಿದ್ದ ಸಂತಸದಲ್ಲಿ ರೈತಾಪಿ ಜನತೆ ಗಂಗೆ-ಗೌರಿಯನ್ನು ಮನೆ ಮನೆಗಳಲ್ಲಿ ಪೂಜಿಸಿದರು.

ಬಸೆಟ್ಟಿ ಅಯ್ಯನವರ ಮನೆಯಿಂದ ಅರ್ಚಕ ನಾಗೇಂದ್ರ ಸಾಂಪ್ರದಾಯಿಕ ಪೂಜೆ ಸಲ್ಲಿಸಲು ಪವಿತ್ರ ಗಂಗೆಯ ಪೂಜೆ ನೆರವೇರಿಸಿದರು. ಗಂಗೆಯಲ್ಲಿ ಮುಳುಗಿ ಕೈಗೆ ಸಿಕ್ಕ ಪವಿತ್ರ ವಸ್ತುವನ್ನು ವಸ್ತ್ರದಲ್ಲಿ ಕಟ್ಟಿಕೊಂಡು ತಂದು ಮನೆಯಲ್ಲಿ ಗಂಗಾಮಾತೆಯನ್ನು ಪೀಠದಲ್ಲಿ ಆಸೀನ ಮಾಡಿದರು. ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜಿಸಿದರು. ವಿವಿಧ ಹಣ್ಣಹಂಪಲುಗಳನ್ನು ಇಟ್ಟು ನೈವೇದ್ಯ ಅರ್ಪಿಸಿದರು. ಮಹಿಳೆಯರು ಗಂಗೆ-ಗೌರಿ ಪ್ರತಿಷ್ಠಾಪನೆ ಸ್ಥಳಕ್ಕೆ ತೆರಳಿ ಬಾಗಿನ ಅರ್ಪಿಸಿ ಮುಡಿತುಂಬಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಗಂಗಾಮತಸ್ಥ ಸಮುದಾಯದವರು ಇದೇ ರೀತಿ ಅಮಾನಿಕೆರೆಯಲ್ಲಿ 3ಬಾರಿ ಮುಳುಗಿ ಕೈಗೆ ಸಿಕ್ಕ ವಸ್ತುವನ್ನು ಗಂಗೆ ಗೌರಿ ಅಮ್ಮನವರಂತೆ ಹಳದಿ ಬಟ್ಟೆಯಲ್ಲಿ ಕಟ್ಟಿ ಪ್ರತ್ಯೇಕವಾಗಿ ತೊಟ್ಟಿಲುವಿನಲ್ಲಿ ಪ್ರತಿಷ್ಠಾಪಿಸಿದರು. ದೇವಿಯ ಎರಡು ತೊಟ್ಟಿಲುಗಳನ್ನು ಸಾಂಪ್ರದಾಯಿಕವಾಗಿ ಅಡ್ಡೆಯಲ್ಲಿ ಇಟ್ಟುಕೊಂಡು ಸಾಗಿದರು. ದೇವಿಯ ಜೋಡಿ ತೊಟ್ಟಿಲುಗಳ ಮೆರವಣಿಗೆ ಬಸವಣ್ಣನ ಗುಡಿ, ರಥಬೀದಿ, ಹೊಸಬೀದಿ, ಬ್ರಹ್ಮೇಶ್ವರ ದೇಗುಲ, ಯೋಗಾನರಸಿಂಹಸ್ವಾಮಿ ಬೀದಿಯಲ್ಲಿ ಸಾಗಿತು.

ಮಹಿಳೆಯರು, ಯುವತಿಯರು, ಪುಟಾಣಿ ಮಕ್ಕಳು ಹೊಸ ಬಟ್ಟೆ ತೊಟ್ಟು ಮನೆಯ ಮುಂದೆ ರಂಗೋಲಿ ಬಿಡಿಸಿ ದೇವಿಯನ್ನು ಬರಮಾಡಿಕೊಂಡರು. ಪ್ರತಿ ಮನೆಗಳ ಮುಂದೆ ದೇವಿಗೆ ಬಾಗಿನ ಅರ್ಪಿಸಿ, ಹಣ್ಣು ಕಾಯಿ ನೀಡಿ ಕರ್ಪೂರದ ಆರತಿ ಬೆಳಗಿದರು.

ಮಹಿಳೆಯರು ಮನೆಮನೆಗೆ ತೆರಳಿ ಹಬ್ಬದ ಸಿಹಿಯನ್ನು ನೀಡಿ ಪರಸ್ಪರ ಶುಭಾಶಯ ಕೋರಿದರು. ಬಾಗಿನ ಅರ್ಪಿಸಿ, ಹಸಿರು ಬಳೆ ತೊಡಿಸಿ ಹಬ್ಬವನ್ನು ಸಂಭ್ರಮಿಸಿದರು. ಹಲವರು ಸುಮಂಗಲಿ ಪೂಜೆಯನ್ನು ನೆರವೇರಿಸಿದರು.

.

Share This Article

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…

ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips

ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…

ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…