ಸಾಗರ: ಗಣಪತಿಕೆರೆ ಅಭಿವೃದ್ಧಿ ಕಾಮಗಾರಿ ಹಾಗೂ ಸ್ವಚ್ಛತೆ ಬಗ್ಗೆ ಶಾಸಕ ಹರತಾಳು ಹಾಲಪ್ಪ ಅವರು ಮಾಜಿ ಸಚಿವ ಕಾಗೋಡು ತಿಮ್ಮಪ್ಪಗೆ ವಿವರಣೆ ನೀಡಿದರು.
ಗಣಪತಿ ಕೆರೆ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ. 15 ದಿನದಲ್ಲಿ ಕೆರೆಯ ಚಿತ್ರಣ ಬದಲಾಯಿಸಲಾಗುವುದು. ಬಿ.ಎಚ್.ರಸ್ತೆ ಪಕ್ಕದ ಇಂದಿರಾಗಾಂಧಿ ಕಾಲೇಜು ಎದುರು ಭಾಗದಲ್ಲಿರುವ ಕೆರೆ ಜಾಗವನ್ನು ಸಮತಟ್ಟು ಮಾಡಲಾಗುತ್ತಿದೆ. ಈ ಕೆರೆಗೆ ಮುಖ್ಯವಾಗಿ ಹರಿದು ಬರುವ ಎಸ್.ಎನ್.ನಗರ ಕೆರೆಯ ನೀರಿನ ತೋಡನ್ನು ಮುಚ್ಚದೆ ಪೈಪು ಅಳವಡಿಸಿ ಜಾಗ ಸಮತಟ್ಟು ಮಾಡಲಾಗುತ್ತಿದೆ ಎಂದು ಶಾಸಕ ಹಾಲಪ್ಪ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ, ಹಾಲಪ್ಪ ಅವರ ಬೆನ್ನು ತಟ್ಟಿ ಒಳ್ಳೆ ಕೆಲಸವನ್ನು ಮಾಡುತ್ತಿದ್ದೀರಿ, ಒಳ್ಳೆಯದಾಗಲಿ ಎಂದು ಹಾರೈಸಿದರು. ನಗರಸಭೆ ಮುಖ್ಯ ಇಂಜನಿಯರ್ ಎಚ್.ನಾಗಪ್ಪ, ನಗರಸಭೆ ಸದಸ್ಯರಾದ ಟಿ.ಡಿ.ಮೇಘರಾಜ್, ಆರ್.ಶ್ರೀನಿವಾಸ್, ಗಣೇಶ್ ಪ್ರಸಾದ್, ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಐ.ವಿ.ಹೆಗಡೆ. ಲಿಂಗರಾಜ್, ಬಿ.ಟಿ.ರವೀಂದ್ರ, ವಿ.ಮಹೇಶ್, ವಿನಾಯಕ ರಾವ್, ಅರುಣ್ ಕುಗ್ವೆ ಇತರರಿದ್ದರು.