ಗದಗ: ರೋಟರಿ ಕ್ಲಬ್ ಗದಗ-ಬೆಟಗೇರಿ, ಜಿ¯್ಲÁ ಕಾರ್ಯಕ್ರಮ ವ್ಯವಸ್ಥಾಪಕರು, ಅಂಧತ್ವ ನಿವಾರಣಾ ವಿಭಾಗ, ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸಾಯಿಟಿ, ಗದಗ ಇವರ ಸಹಯೋಗದೊಂದಿಗೆ ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್ಫೇರ್ ಸೊಸೈಟಿ (ಜಿ¯್ಲÁ ಸ್ಟೇಡಿಯಂ ಹತ್ತಿರ) ನೇತ್ರ ತಪಾಸಣೆ ಹಾಗೂ ಕಣ್ಣಿನಲ್ಲಿ ಮಸೂರ ಅಳವಡಿಸುವ ಈ ಶಸ್ತç ಚಿಕಿತ್ಸಾ ಶಿಬಿರನವನ್ನು ಏರ್ಪಡಿಲಾಗಿತ್ತು. ಈ ಶಸ್ತç ಚಿಕಿತ್ಸಾ ಶಿಬಿರವನ್ನು ಶ್ರೀ ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ 2025 ಗದಗನ ಪದಾಧಿಕಾಗಳು ವಹಿಸಿದ್ದರು. ಸುಮಾರು 65 ಜನ ರೋಗಿಗಳನ್ನು ತಪಾಸಣೆ ಮಾಡಿ ಶಸ್ತç ಚಿಕಿತ್ಸೆ ಅವಶ್ಯವಿದ್ದ ಹಾಗೂ ಯೋಗ್ಯರಾದ 21 ಜನರಿಗೆ ನೇತ್ರ ಶಸ್ತç ಚಿಕಿತ್ಸೆಯುನ್ನು ಕೈಗೊಳ್ಳಲಾಯಿತು.

202ನೇ ಶಸ್ತç ಚಿಕಿತ್ಸೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಪರಮಪೂಜ್ಯ ಜಗದ್ಗುರು ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳು ರೋಟರಿ ಸಂಸ್ಥೆಯು ಕೈಗೊಳ್ಳುತ್ತಿರುವ ನಿರಂತರ ನೇತ್ರ ತಪಾಸಣೆ ಹಾಗೂ ಶಸ್ತç ಚಿಕಿತ್ಸಾ ಶಿಬಿರವು ಬಡವರಿಗೆ ವರವಾಗಿದ್ದು ಅವರ ದೃಷ್ಠಿಯನ್ನು ಮರಳಿ ಪಡೆಯಲು ನೆರವಾಗಿದೆ ಹಾಗೂ ಸಂಸ್ಥೆಯು 23 ವರ್ಷಗಳಿಂದ ಕೈಗೊಳ್ಳುತ್ತಿರುವ ಈ ಕಾರ್ಯಕ್ರಮವು ಅತ್ಯಂತ ಉತ್ತಮ ಗುಣಮಟ್ಟದ್ದಾಗಿದ್ದು ಶ್ಲಾಘನೀವೆಂದು ಎಲ್ಲ ಫಲಾನುಭವಿ ರೋಗಿಗಳಿಗೆ ಉತ್ತಮ ದೃಷ್ಠಿ ದೊರಕಲೆಂದು ಆಶೀರ್ವದಿಸಿದರು. ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾದ ಶ್ರೀಧರ ಸುಲ್ತಾನಪೂರ ವಹಿಸಿ ಸಂಸ್ಥೆಯ ಕಾರ್ಯಕ್ರಮ ಕುರಿತು ಮಾಹಿತಿ ನೀಡಿ ಸಂಸ್ಥೆಯು ಯಾವ ರೀತಿ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತದೆಂದು ತಿಳಿಸಿದರು. ಶ್ರೀ ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ 2025ರ ಅಧ್ಯಕ್ಷರಾದ ಡಾ. ಧನೇಶ ದೇಸಾಯಿಯವರು ಮಾತನಾಡಿ ಗದಗ ಶ್ರೀ ತೋಂಟದಾರ್ಯ ಮಠದ ಜಾತ್ರೆಯು ಧಾರ್ಮಿಕ ಭಾವನೆಯ ಜಾತ್ರೆಯ ಜೊತೆಗೆ ಅನೇಕ ಸಾಂಸ್ಕçತಿಕ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ವರ್ಷ ರೈತರಿಗಾಗಿ ಅನೇಕ ಮಾಹಿತಿ ಸಮ್ಮೇಳನ, ಆರೋಗ್ಯ ತಪಾಸಣೆಯ ಜೊತೆಗೆ ಇಂದು ರೋಟರಿ ಸಂಸ್ಥೆಯೊAದಿಗೆ ಕಣ್ಣಿನ ತಪಾಸಣೆ ಹಾಗೂ ಶಸ್ತç ಚಿಕಿತ್ಸೆಯನ್ನು ಕೂಡ ಏರ್ಪಡಿಸಲಾಗಿದ್ದು ಸಂಸ್ಥೆಗೆ ಸಮಿತಿಯ ಪರವಾಗಿ ಶುಭಾಶಯಕೋರಿದರು. ರೋಟರಿ ಸಂಸ್ಥೆಯ ಹಿರಿಯ ಸದಸ್ಯರಾದ ರೊ.ಸುರೇಶ ಕುಂಬಾರವರು ಇಲ್ಲ ರೋಗಿಗಳಿಗೆ ಬ್ರೆಡ್ಗಳನ್ನು ಹಂಚಿದರು. ನೇತ್ರ ಸಹಾಯಕರಾದ ಶ್ರೀ ರುದ್ರೇಶ ಶಸ್ತç ಚಿಕಿತ್ಸೆಗೆ ಒಳಗಾದ ರೋಗಿಗಳು ತಮ್ಮ ಕಣ್ಣಿ ಆರೋಗ್ಯವನ್ನು ಯಾವ ರೀತಿ ಕಾಳಜಿವಹಿಸಬೇಕೆಂದು ತಳಿಸಿದರು. ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೊ. ಆರ್.ಬಿ. ಉಪ್ಪಿನ ಸರ್ವರನ್ನು ಸ್ವಾಗತಿಸಿದರು. ಅಸಿಸ್ಟಂಟ ಗರ್ನರ್ ಶಿವಾಚಾರ್ಯ ಎಸ್. ಹೊಸಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು, ಸಂಸ್ಥೆಯ ಅಧ್ಯಕ್ಷರಾದ ಡಾ. ಆರ್. ಬಿ. ಉಪ್ಪಿನ, ಐಒಎಲ್ ಚೇರಮನ್ನರಾದ ರೊ. ಶೇಖರ ಸಜ್ಜನರ ವೇದಿಕೆಯ, ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ರೋಟರಿ ಸಂಸ್ಥೆ ವೆಲ್ ಫೇರ್ ಸೊಸಾಯಿಟಿಯ ಖಜಾಂಚಿಗಳಾದ ರೊ. ಚನ್ನವೀರಪ್ಪ ಹುಣಶಿಕಟ್ಟಯವರು ಕಾರ್ಯಕ್ರಮ ವಂದಿಸಿದರು. ರೋಟರಿ ಸಂಸ್ಥೆಯ ಸದಸ್ಯರಾದ, ರೊ. ಶ್ರೀಧರಗೌಡ ಧರ್ಮಾಯತ, ರೊ ಮಹೇಶ ಹಿಂಡಿ, ರೊ. ಡಾ ರಾಜೇಂದ್ರ ಗಚ್ಛಿನಮಠ, ರೊ. ಡಾ. ಪ್ರದೀಪ ಉಗಲಾಟ, ರೊ.ಶ್ರೀಮತಿ ವೀಣಾ ತಿರ್ಲಾಪೂರ, ರೊ. ಡಾ. ಕಮಲಾಕ್ಷಿ ಅಂಗಡಿ, ರೊ. ಅಕ್ಷಯ ವ್ಹಿ ಶೆಟ್ಟಿ, ರೊ.ವಿಶ್ವನಾಥ ಯಳಮಲಿ, ಡಾ ವಿನಯ್ ಟಿಕಾರೆ ಮುಂತಾದವರು ಉಪಸ್ಥಿತರಿದ್ದರು. ಈ ಶಸ್ತç ಚಿಕಿತ್ಸಾ ಶಿಬಿರದಲ್ಲಿ ರುದ್ರೇಶ, ನೇತ್ರಾ, ಜ್ಯೋತಿ ದೊಡ್ಡಮನಿ, ದೀಪಾ, ಆನಂದ ಸಿಂಗ್ರಿ ನೇತ್ರ ಶಸ್ತç ಚಿಕಿತ್ಸೆ ನಡೆಸಲು ಸಹಾಯ ಮಾಡಿದರು.