ವಿಜಯವಾಣಿ ಸುದ್ದಿಜಾಲ ಗದಗ
ಒಂದು ಕಾಲದಲ್ಲಿ ಸಿನೆಮಾ ಗೀತೆಗಳು, ಸಂಭಾಷಣೆ ಮತ್ತು ಕಥಾ ವಸ್ತು ನೀತಿ ಬೋಧಕವಾಗಿತ್ತು. ಸಮಾಜಕ್ಕೆ ಉದಾತ್ತ ಸಂದೇಶ ಸಾರುವ ಸಾಧನವಾಗಿದ್ದವು. ಆದರೆ ಇಂದಿನ ಬಹುತೇಕ ಸಿನೆಮಾ ಗೀತೆಗಳಲ್ಲಿ ಮತ್ತು ಸಾಹಿತ್ಯದಲ್ಲಿ ಇಂಥ ಸಂದೇಶ ಮರೆಯಾಗಿ ಯುವ ಪೀಳಿಗೆಯನ್ನು ದಾರಿ ತಪ್ಪಿಸುವ ಸಾಹಿತ್ಯ ಸೃಷ್ಟಿ ಆಗುತ್ತಿರುವುದು ಶೋಚನೀಯ ಎಂದು ಸಾಹಿತಿ, ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ “ಚಲನಚಿತ್ರಗಿತೆಗಳಲ್ಲಿ ಮೊಳಗಿದ ಕನ್ನಡ ಡಿಂಡಿಮದ ನಾದ’ ಎಂಬ ವಿಷಯವಾಗಿ ಉಪನ್ಯಾಸ ನೀಡಿ ಮಾತನಾಡಿದರು.
ರಾಗ, ತಾಳ, ಸಾಹಿತ್ಯ ಎಲ್ಲವೂ ಹಿಂದಿನ ಚಲನಚಿತ್ರಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸಂಯೋಜನೆಗೊಂಡು ಐವತ್ತು ಅರವತ್ತು ವರ್ಷ ಕಳೆದರೂ ಹಿಂದಿನ ಹಳೆಯ ಚಲನಚಿತ್ರಗಿತೆಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ. ನಾಡು ನುಡಿಯ ಅಭಿಮಾನವನ್ನು ಉದ್ದೀಪನಗೊಳಿಸುವ ಅನೇಕ ಚಿತ್ರಗಿತೆಗಳು ಸಾಹಿತ್ಯಕ ಮೌಲ್ಯಗಳಿಂದ ಕೂಡಿವೆ. ಇತ್ತೀಚೆಗೆ ಸಿನಿಮಾ ಗೀತೆಗಳಲ್ಲಿ ಅಗ್ಗದ ಪ್ರಚಾರದ ಸರಕು ತುಂಬಿಕೊಂಡಿದ್ದು ಅವುಗಳನ್ನು ಕೇಳಲು ಪ್ರಜ್ಞಾವಂತರು ಮುಜುಗರ ಅನುಭವಿಸುವಂತಾಗಿದೆ. ಅಶ್ಲಿಲ ಸಾಹಿತ್ಯ ಬಗ್ಗೆ ಸೆನ್ಸಾರ ಮಂಡಳಿ ಗಮನ ಹರಿಸಬೇಕು ಎಂದು ಹೇಳಿದರು.
ಅಧ್ಯತೆ ವಹಿಸಿ ಮಾತನಾಡಿದ ಕಬ್ಬಿಗರ ಕೂಟದ ಅಧ್ಯ ಮನೋಹರ ಮೇರವಾಡೆ, ಕನ್ನಡ ಅಭಿಮಾನ ಕೇವಲ ನವೆಂಬರ ತಿಂಗಳಿಗೆ ಸೀಮಿತ ಆಗಬಾರದು. ಕನ್ನಡ ನಾಡು ನುಡಿಯ ಸಲುವಾಗಿ ಪ್ರತಿಯೊಬ್ಬರು ಸಮರ್ಪಣಾ ಭಾವದಿಂದ ದುಡಿಯಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಬಸವರಾಜ ಗಣಪ್ಪನವರ, ಆರ್. ಡಿ. ಕಪ್ಪಲಿ, ಮಲ್ಲಿಕಾರ್ಜುನ ಪೂಜಾರ, ಎಂ. ಬಿ. ಕೆಂಬಾವಿಮಠ, ಬಿ. ಎಸ್. ಹಿಂಡಿ, ರವಿ ಛಲವಾದಿ, ಪರಶು ಕಾಳೆ, ಎಚ್. ಕೆ. ರಂಗ್ರೇಜ, ಜಗನ್ನಾಥ ಟಿಕಣದಾರ, ಐ. ಟಿ. ಗದಗಿನ, ರಾಮಚಂದ್ರ ಗವಳಿ ಹಲವರು ಇದ್ದರು.