ಮುಂಡರಗಿ: ವಿಶೇಷ‌ಚೇತನರ ಸ್ವಾವಲಂಬನೆಗೆ ನರೇಗಾ ಆಸರೆ

blank
ಮುಂಡರಗಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಗತಿಯಲ್ಲಿರುವ ನರೇಗಾ ಸಮುದಾಯ ಬದು ನಿರ್ಮಾಣ ಕಾಮಗಾರಿಗಳಲ್ಲಿ ವಿಶೇಷಚೇತನರು ಹಾಗೂ ವಯೋವೃದ್ಧ ಹಿರಿಯರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸ್ವಾವಲಂಬನೆ ಸಾಧಿಸಿದ್ದಾರೆ.
ಬೇಸಿಗೆ ಬಂದರೆ ಗುಳೆ ಹೋಗುವ ಜನರಿಗೆ ಕೆಲಸ ಕಲ್ಪಿಸಿ ಇದ್ದೂರಲ್ಲೇ ದುಡಿಮೆಗೆ ದಾರಿ ಮಾಡುವ ನರೇಗಾ ಸಮುದಾಯ ಕಾಮಗಾರಿಗಳು ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಈಗಾಗಲೇ ಆರಂಭವಾಗಿವೆ. ಜೊತೆಗೆ ವಿಶೇಷಚೇತನರಿಗೂ ಮುತುವರ್ಜಿಯಿಂದ ಕೆಲಸ ನೀಡಿ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದೆ. ಬಾಗೇವಾಡಿ ಗ್ರಾಮದ 41 ವರ್ಷದ ಹೊನಕೇರಪ್ಪ ಭಕ್ಷಪ್ಪನವರ ಅವರ ಒಂದು ಕಾಲು ಮೊದಲಿನಿಂದಲೂ ಊನವಾಗಿದ್ದು ನರೇಗಾ ಯೋಜನೆಯ ಕಾಮಗಾರಿಯಲ್ಲಿ ಕೂಲಿಕಾರರಿಗೆ ನೀರು ಕೊಡುವುದರ ಜೊತೆಗೆ ಪಡ ಕಡಿಯುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಹಳ್ಳಿಗಳ ಅಭ್ಯುದಯದ ಕನಸು ಹೊಂದಿರುವ ನರೇಗಾ ಯೋಜನೆಯಲ್ಲಿ ಭಾಗವಹಿಸಿ ಗರ್ಭಿಣಿಯರು, ಅಂಗವಿಕಲರು ಹಾಗೂ ವೃದ್ಧರಿಗಾಗಿ ಇರುವ ಅರ್ಧ ಕೆಲಸ ಪೂರ್ಣ ಕೂಲಿ ನಿಯಮವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಕಾಲು ಊನ ಇರುವುದರಿಂದ ಇತರೆ ಜನರ ಜಮೀನು ಹಾಗೂ ದಿನಗೂಲಿ ಕೆಲಸಗಳಲ್ಲಿ ಕೆಲಸ ಸಿಗುವುದು ಕಡಿಮೆ. ಆದರೆ ನರೇಗಾ ಯೋಜನೆಯ ಮೂಲಕ ಆ ಕೊರತೆ ನೀಗಿ ಉತ್ತಮ ಕೂಲಿ ಮೊತ್ತವು ಪಾವತಿಯಾಗುತ್ತಿದೆ ಎನ್ನುತ್ತಾರೆ ಅವರು.
ಹೊನಕೇರಪ್ಪ ಅವರು ನರೇಗಾ ಯೋಜನೆಯನ್ನು ಹೀಗೆ ಸದುಪಯೋಗಪಡಿಸಿಕೊಂಡರೆ ಬಿದರಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡವಾಡ ಗ್ರಾಮದ 45 ವರ್ಷದ ಅಶೋಕ ವಿರೂಪಾಕ್ಷಪ್ಪ ಕೊಂಚಿಗೇರಿ ಅವರ ಬಲಗಾಲು ಸಹ ಹುಟ್ಟಿನಿಂದ ಪೊಲಿಯೋ ಕಾರಣಕ್ಕೆ ಊನವಾಗಿದೆ. ಖಾಸಗಿ ವ್ಯಕ್ತಿಗಳ ಬಳಿ ಅವರಿಗೂ ಕೂಲಿ ಕೆಲಸ ಸಿಗುವುದು ದುಸ್ತರ. ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ನರೇಗಾ ಯೋಜನೆಯಡಿ ಸಕ್ರಿಯರಾಗಿ ಸಮುದಾಯ ಕಾಮಗಾರಿಯಲ್ಲಿ ಭಾಗವಹಿಸಿರುವ ಅವರು ಅರ್ಧ ಕೆಲಸ ಪೂರ್ಣ ಕೂಲಿ ನಿಯಮದಿಂದ ದಿನವೊಂದಕ್ಕೆ 370 ರೂಪಾಯಿ ಕೂಲಿ ಪಡೆಯುತ್ತಿದ್ದಾರೆ.  ಇದರಿಂದ ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಗಿದ್ದು ಮನೆಯ ಸ್ಥಿತಿ ಸುಧಾರಣೆಗೆ ಕಾರಣವಾಗಿದೆ ಎನ್ನುವುದು ಯೋಜನೆಯ ಕುರಿತು ಅವರ ಖುಷಿಯ ಮಾತು.
ಮುಂಡವಾಡ ಗ್ರಾಮದ ಸಮುದಾಯ ಬದು ಕಾಮಗಾರಿಯಲ್ಲಿ ಭಾಗವಹಿಸಿರುವ 40 ವರ್ಷದ ಹಾಲವ್ವ ದುರಗಪ್ಪ ಹರಿಜನ ಹುಟ್ಟಿನಿಂದಲೇ ವಿಶೇಷಚೇತನ ಮಹಿಳೆ. ಎಡಗೈ ಮಣಿಕಟ್ಟು ಮುಷ್ಟಿ ಸಮಸ್ಯೆಯಿಂದ ಕುಗ್ಗದ ಇವರು ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಗ್ರಾಮ ಪಂಚಾಯತ ಮೂಲಕ ಹೆಸರು ನೋಂದಾಯಿಸಿಕೊಂಡು ಒಂದೇ ಕೈಯ್ಯಲ್ಲಿ ಬುಟ್ಟಿಗೆ ಮಣ್ಣಿನ ಹೆಂಡೆಗಳನ್ನು ತುಂಬುವ ಮೂಲಕ ನರೇಗಾ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಬಡತನದ ಮನಿ ನಮವು. ನರೇಗಾದಾಗ ಭಾಗವಹಿಸಿದ್ರ ಬರೋ ಕೂಲಿ ಮನ್ತನಕ್ಕ ಅನುಕೂಲ ಆಗತ್ರಿ. ಅದರಾಗು ಈಗ ಕೂಲಿ 370 ರೂಪಾಯಿ ಆಗಿರಾದ್ರಿಂದ ಭಾಳ ಖುಷಿಯಾಗೇತ್ರಿ. ಅದಕ ಬದು ಕೆಲಸದಾಗ ತಪ್ಪದ ಭಾಗವಹಿಸಿನ್ರಿ ಎನ್ನುವುದು ಹಾಲವ್ವ ಅವರ ಮಾತು.
ಕೋಟ್
ನ್ಯೋನ್ಯತೆಯನ್ನು ಲೆಕ್ಕಿಸದೆ ಈ ಮೂರು ಜನ ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿರುವುದು ಖಂಡಿತ ಮಾದರಿ. ಗ್ರಾಪಂ ಮಟ್ಟದಲ್ಲಿ ವಿಶೇಷಚೇತನರು ಹಾಗೂ ಮಹಿಳೆಯರು ಹೆಚ್ಚೆಚ್ಚು ಭಾಗವಹಿಸುವಂತೆ ಮಾಡಲು ಅಗತ್ಯ ಐಇಸಿ ಚಟುವಟಿಕೆಗಳನ್ನು ತಾಲೂಕಿನ ಗ್ರಾಪಂ ಗಳಲ್ಲಿ ಹಮ್ಮಿಕೊಂಡಿದ್ದೇವು. ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ನರೇಗಾ ಯೋಜನೆಯ ಆಶಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಿಳಿಸಿ ಸಮರ್ಪಕ ಅನುಷ್ಟಾನಕ್ಕಾಗಿ ಶ್ರಮಿಸಲಿದ್ದೇವೆ.
ವಿಶ್ವನಾಥ ಹೊಸಮನಿ
ತಾಪಂ ಇಓ, ಮುಂಡರಗಿ
Share This Article

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…

ಕಂಕುಳಲ್ಲಿರುವ ಕಪ್ಪು ಕಲೆ ಕಡಿಮೆಯಾಗಲು ಏನು ಮಾಡಬೇಕು? underarms

underarms: ಅನೇಕ ಹುಡುಗಿಯರು ಕಂಕುಳಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು  ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು…