ದಾಸೋಹ ಆದರ್ಶದಿಂದ ಬದುಕು ಉನ್ನತಿ

blank

ಬೈಲಹೊಂಗಲ:  ಗುರು ಮುಟ್ಟಿ ಗುರುವಾಗುವ ಧರ್ಮ ನಮ್ಮದಾಗಿದೆ. ಗುರು ನೀಡಿದ ಇಷ್ಟಲಿಂಗ ಪೂಜೆ, ಶಿವಯೋಗ ಸಾಧನೆ, ಕಾಯಕ, ದಾಸೋಹದ ಆದರ್ಶ ಸನ್ಮಾರ್ಗದ ಮೂಲಕ ನಮ್ಮನ್ನು ಗುರು ಸ್ಥಾನಕ್ಕೆ ಕರೆದೊಯ್ಯುತ್ತವೆ ಎಂದು ಹುಣಸೀಕಟ್ಟಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಹೇಳಿದರು.

ತಾಲೂಕಿನ ನೇಗಿನಹಾಳ ಗ್ರಾಮದ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವತತ್ತ್ವ ಸಮಾವೇಶದಲ್ಲಿ ಮಾತನಾಡಿ, ಗುರುಗಳು ನೀಡಿದ ಸಂಸ್ಕಾರವನ್ನು ಶ್ರದ್ಧೆ, ನಿಷ್ಠೆಯಿಂದ ಪಾಲಿಸಬೇಕು. ಅಂದಾಗ ಜೀವನದಲ್ಲಿ ಮುಕ್ತಿ ಲಭಿಸಲು ಸಾಧ್ಯ ಎಂದರು.
ಹೊಳಿಹೊಸುರ ಮಡಿವಾಳೇಶ್ವರ ಮಠದ ಪ್ರಭುರಾಜೇಂದ್ರ ಸ್ವಾಮೀಜಿ ಮಾತನಾಡಿ, ಮಡಿವಾಳೇಶ್ವರರು ನೇಪಾಳದ ರಾಜ ಕಾಣಿಕೆಯಾಗಿ ನೀಡಿದ ವಜ್ರ ಖಚಿತ ಸಿಂಹಾಸನವನ್ನು ಅವನ ಮುಂದೆಯೇ ತುಂಡರಿಸಿ ಅಲ್ಲಿನ ಬಡವರಿಗೆ ಹಂಚಿ ನನ್ನದು ದಾಸೋಹ ಧರ್ಮವಾಗಿದೆ ಎಂದು ಸಾರಿದ್ದಾರೆ ಎಂದರು.

ವಿರೇಶ್ವರ ಸ್ವಾಮೀಜಿ, ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ ಪ್ರವಚನ ನೀಡಿದರು. ಕಾಂಗ್ರೆಸ್ ಮುಖಂಡ ನಾನಾಸಾಹೇಬ ಪಾಟೀಲ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಕೋಟಗಿ, ದಾಸೋಹಿಗಳಾದ ನಿರಂಜನ ಮೆಟ್ಯಾಲ, ಮಡಿವಾಳಪ್ಪ ಲಕ್ಕನಗೌಡ್ರ, ರತ್ನಮ್ಮ ಪಡಸಲಗಿ, ಪಾರ್ವತೆವ್ವ ಚನ್ನಪ್ಪಗೌಡರ, ಶೋಭಾ ಆಲದಕಟ್ಟಿ, ಕಾವೇರಿ ಮೆಳವಂಕಿ, ಚಂದ್ರು ಮೆಳವಂಕಿ, ಸಿಂಹಣ್ಣ ನರಸನ್ನವರ, ಚಂದ್ರಶೇಖರ ನರಸನ್ನವರ, ಕೀರಪ್ಪ ನರಸನ್ನವರ, ಸುಭಾಷ ನರಸನ್ನವರ ಇತರರಿದ್ದರು.

Share This Article

ನಿಮ್ಮ ಮುಖದಲ್ಲಿ ಬೇಡದ ಕೂದಲು ಇದೆಯೇ? ಈ ಸಲಹೆಗಳನ್ನು ಅನುಸರಿಸಿ..Unwanted Hair

Unwanted Hair : ಮುಖದ ಮೇಲೆ ಬೇಡದ ಕೂದಲು ಸಾಮಾನ್ಯ ಆದರೆ ಮಹಿಳೆಯರಿಗೆ ಮುಜುಗರದ ಸಮಸ್ಯೆಯಾಗಿದೆ.…

ಕೇವಲ 2 ಚಮಚ ಉಪ್ಪು ಇದ್ದರೆ ಸಾಕು ಮನೆಗೆ ಇರುವೆ, ಜಿರಳೆ ಬರದಂತೆ ತಡೆಯಬಹುದು..| Salt

Salt: ಉಪ್ಪು ಅಡಿಗೆಗೆ ರುಚಿಯನ್ನು ಮಾತ್ರ ನೀಡುವುದಿಲ್ಲ, ಅದು ನಿಮ್ಮ ಅಡುಗೆ ಮನೆಯ ಸ್ವಚ್ಛತೆಗೂ ಸಹಾಯ…

ಜಸ್ಟ್​ ಈ ಸಣ್ಣ ಕೆಲಸ ಮಾಡಿ… ನಿಮ್ಮ ಮುಖದ ಮೇಲಿನ ಮೊಡವೆಗಳನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಿ! Glowing Skin

Glowing Skin : ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಬಯಸುತ್ತಾರೆ. ಆದರೆ, ಪ್ರಸ್ತುತ ಕಾಲದಲ್ಲಿ,…