ಸಕಲೇಶಪುರ: ತಾಲೂಕಿನ ಅಚ್ಚನಹಳ್ಳಿ ಗ್ರಾಮದ ರೆಸಾರ್ಟ್ವೊಂದರಲ್ಲಿ ಅತಿಥಿಗಳು ಹಾಗೂ ನೌಕರರ ನಡುವೆ ಮಾರಾಮಾರಿ ನಡೆದು ನಾಲ್ವರು ಗಾಯಗೊಂಡಿರುವುದರ ಜತೆಗೆ ರೆಸಾರ್ಟ್ಗೂ ಹಾನಿಯಾಗಿದೆ.

ಭಾನುವಾರ ಮುಂಜಾನೆ ರೆಸಾರ್ಟ್ಗೆ ಆಗಮಿಸಿದ್ದ ಮಂಗಳೂರು ಮೂಲದ 36 ಜನರ ತಂಡ ಸ್ವಿಮಿಂಗ್ ಫೂಲ್ ಬಳಸುವ ವಿಚಾರದಲ್ಲಿ ರೆಸಾರ್ಟ್ ನೌಕರರೊಂದಿಗೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ ವೇಳೆ ಒಂದು ತಂಡ ರೆಸಾರ್ಟ್ ಮೇಲೆ ಕಲ್ಲು ತೂರಾಟ ನಡೆಸಿದರೆ ಮತ್ತೊಂದು ತಂಡ ಎದುರಾಳಿಗಳ ಮೇಲೆ ಬ್ಯಾಟ್ನಿಂದ ಹಲ್ಲೆ ನಡೆಸಿದೆ. ಪರಿಣಾಮ ರೆಸಾರ್ಟ್ನ ಕಿಟಿಕಿ, ಬಾಗಿಲುಗಳ ಗಾಜು ಧ್ವಸಗೊಂಡಿದ್ದರೆ, ಮಹಿಳೆಯರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.
ಗಾಯಾಳುಗಳು ಹಾನುಬಾಳ್ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
TAGGED:Hassansakleshpuraಅಚ್ಚನಹಳ್ಳಿ ಗ್ರಾಮದ ರೆಸಾರ್ಟ್ಅತಿಥಿಗಳು ಹಾಗೂ ನೌಕರರ ನಡುವೆಒಂದು ತಂಡ ರೆಸಾರ್ಟ್ ಮೇಲೆ ಕಲ್ಲು ತೂರಾಟಗಾಯಾಳುಗಳು ಹಾನುಬಾಳ್ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆಜಗಳ ವಿಕೋಪಕ್ಕೆ ತಿರುಗಿನಾಲ್ವರು ಗಾಯಬಾಗಿಲುಗಳ ಗಾಜು ಧ್ವಸಮಂಗಳೂರು ಮೂಲದ 36 ಜನರ ತಂಡಮತ್ತೊಂದು ತಂಡ ಎದುರಾಳಿಗಳ ಮೇಲೆ ಬ್ಯಾಟ್ನಿಂದ ಹಲ್ಲೆಮಹಿಳೆಯರು ಸೇರಿದಂತೆ ನಾಲ್ವರು ಗಾಯಮಾರಾಮಾರಿರೆಸಾರ್ಟ್ ನೌಕರರೊಂದಿಗೆ ಜಗಳ ಆರಂಭರೆಸಾರ್ಟ್ಗೂ ಹಾನಿರೆಸಾರ್ಟ್ನ ಕಿಟಿಕಿಸಕಲೇಶಪುರಸ್ವಿಮಿಂಗ್ ಫೂಲ್ ಬಳಸುವ ವಿಚಾರಹಾಸನ