ಮಾಜಿ ರಣಜಿ ಕ್ರಿಕೆಟಿಗ, ಈಗ ರಸ್ತೆಬದಿ ದಾಲ್​ ಪೂರಿ ಮಾರುತ್ತಿದ್ದಾನೆ!

blank

ಗೌಹಾಟಿ : ಒಂದು ಕಾಲದಲ್ಲಿ ಅಸ್ಸಾಂ ರಾಜ್ಯವನ್ನು ಹಲವು ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದ, ರಣಜಿ ಕ್ರಿಕೆಟ್​ನಲ್ಲಿ ತನ್ನ ಪ್ರತಿಭೆಯನ್ನು ಪ್ರಕಾಶಿಸಿದ್ದ ಕ್ರಿಕೆಟಿಗ ಈಗ ಜೀವನ ಸಾಗಿಸಲು, ರಸ್ತೆಬದಿಯಲ್ಲಿ ದಾಲ್​ ಪೂರಿ ಮಾರುತ್ತಿದ್ದಾನೆ. ಒಂದು ಕಾಲದಲ್ಲಿ, ಕ್ರಿಕೆಟ್ ಜಗತ್ತಲ್ಲಿ ಸಾಧನೆಯ ಶ್ರೇಣಿ ಏರಿದ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರಿಗೆ ಬೌಲ್ ಮಾಡಿದ್ದ ಪ್ರಕಾಶ್​ ಭಗತ್​, ಇಂದು ಬಡತನ ಬೇಗೆಯಲ್ಲಿ ಬೇಯುತ್ತಿದ್ದಾರೆ ಎಂದು ಐಎಎನ್​ಎಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

blank

ಮಾಜಿ ದೇಶೀಯ ಕ್ರಿಕೆಟ್​ ಆಟಗಾರರಾದ ಅಸ್ಸಾಂನ ಸಿಲ್ಚರ್​ನ ನಿವಾಸಿ ಭಗತ್​, 1999 ರಲ್ಲಿ ಅಸ್ಸಾಂನ ಸಿಲ್ಚರ್​ ಡಿಸ್ಟ್ರಿಕ್ಟ್​ ಸ್ಪೋರ್ಟ್ಸ್ ಅಸೋಸಿಯೇಷನ್​ನ ಅಂಡರ್-13 ಟೂರ್ನಿಯಲ್ಲಿ ಭಾಗವಹಿಸಿದ್ದರು. ನಂತರ ಅಂಡರ್-16, ಅಂಡರ್-19 ಮತ್ತು ಅಂಡರ್-23 ವಿಭಾಗಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟಗಳಲ್ಲಿ ಭಾಗವಹಿಸಿದ್ದರು. ರಣಜಿ ಕ್ರಿಕೆಟ್​ನಲ್ಲಿ ತಮ್ಮ ರಾಜ್ಯ ತಂಡದೊಂದಿಗೆ 2009/10 ಮತ್ತು 2010/11ರ ಸೀಸನ್​ಗಳಲ್ಲಿ ಆಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ‘ಕಾಮಿಡಿ ಕಿಲಾಡಿಗಳು’ ಸೀಸನ್​-2 ಗ್ರ್ಯಾಂಡ್​ ಫಿನಾಲೆಗೆ ಕ್ಷಣಗಣನೆ, ಯಾರ ಮುಡಿಗೇರಲಿದೆ ಟ್ರೋಫಿ?

ಲೆಫ್ಟ್​ ಆರ್ಮ್​ ಸ್ಪಿನ್ನರ್​ ಆಗಿದ್ದ ಭಗತ್​ ಅವರು, 2003 ರಲ್ಲಿ ತಮ್ಮ ಪ್ರತಿಭೆಯ ಆಧಾರದ ಮೇಲೆ ಬೆಂಗಳೂರಿನ ನಾಷನಲ್ ಕ್ರಿಕೆಟ್​ ಅಕಾಡೆಮಿಯಲ್ಲಿ ಒಂದು ತಿಂಗಳ ತರಬೇತಿಗಾಗಿ ಆಯ್ಕೆಯಾಗಿದ್ದರು. ಅಕಾಡೆಮಿ ಪಂದ್ಯಗಳಲ್ಲಿ ಆಗಿನ ಕ್ಯಾಪ್ಟನ್ ಸೌರವ್​ ಗಂಗೂಲಿ ಅವರಿಗೆ ಬೌಲಿಂಗ್ ಮಾಡಿದ್ದರು. ಕ್ರಿಕೆಟ್​ ಜಗತ್ತಿನ ತಾರೆಗಳಾದ ಸಚಿನ್ ತೆಂಡೂಲ್ಕರ್, ಜಹೀರ್​ ಖಾನ್, ಹರಭಜನ್​ ಸಿಂಗ್ ಮತ್ತು ವೀರೆಂದರ್​ ಸೆಹವಾಗ್​ರನ್ನು ಭೇಟಿ ಮಾಡಿದ್ದರು. ಆದರೆ, 2011 ರಲ್ಲಿ ತಮ್ಮ ತಂದೆ ಗಜಧರ್ ಭಗತ್​ ಅವರು ಹೃದಯಾಘಾತದಿಂದ ನಿಧನರಾದಾಗ, ಕ್ರಿಕೆಟ್​ಗೆ ವಿದಾಯ ಹೇಳಬೇಕಾಯಿತು.

“ನಾನು ನನ್ನ ತಂದೆ ಮೃತಪಟ್ಟ ಮೇಲೆ ಕ್ರಿಕೆಟ್​ ಬಿಡಬೇಕಾಯಿತು. ನನ್ನ ತಂದೆ ಮತ್ತು ಅಣ್ಣ ದೀಪಕ್​ ಭಗತ್​ ತಳ್ಳೋ ಗಾಡಿಯಲ್ಲಿ ಚಾಟ್​ ಫುಡ್​ ಮಾರುತ್ತಿದ್ದರು. ತಂದೆ ಸತ್ತ ಮೇಲೆ ನನ್ನ ಅಣ್ಣನಿಗೂ ಹುಷಾರಿರುವುದಿಲ್ಲ” ಎಂದಿದ್ದಾರೆ, ಈಗ ಅದೇ ಗಾಡಿಯಲ್ಲಿ ದಾಲ್​ ಪೂರಿ ಮುಂತಾದ ಚ್ಯಾಟ್​ ಮಾರುತ್ತಿರುವ ಪ್ರಕಾಶ್​ ಭಗತ್​. ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿರುವ 34 ವರ್ಷದ ಭಗತ್​, ತಮಗೆ ಆರ್ಥಿಕ ಬೆಂಬಲ ಸಿಕ್ಕಲ್ಲಿ ಈಗಲೂ ಕ್ರಿಕೆಟ್​ಗೆ ಮರಳುವ ಆಸೆ ಇದೆ ಎಂದಿದ್ದಾರೆ. (ಏಜೆನ್ಸೀಸ್)

 

Share This Article
blank

ರಾತ್ರಿ 9 ಗಂಟೆ ಮೇಲೆ ಊಟ ಮಾಡೋದ್ರಿಂದ ಅನಾನುಕೂಲಗಳೇ ಅಧಿಕ: ಊಟಕ್ಕೆ ಸರಿಯಾದ ಸಮಯ ಯಾವುದು? | Eating

Eating: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಡವಾಗಿ ಭೋಜನ ಮಾಡುತ್ತಿದ್ದಾರೆ, ಆದರೆ ವೈದ್ಯಕೀಯ ತಜ್ಞರು ಇದು…

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

blank