ಮತ್ತೆ ಆಯತಪ್ಪಿ ಎಡವಿದ ಮಾಜಿ ಸಿಎಂ; ಈ ಊರಲ್ಲಿ ಸಿದ್ದರಾಮಯ್ಯಗೆ ಇದೇನಿದು ಸಮಸ್ಯೆ?!

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಆಯತಪ್ಪಿ ಎಡವಿದ್ದಾರೆ. ಇಂದು ಕಾಲು ಜಾರಿ ಟೀಪಾಯಿ ಮೇಲೆ ಕುಸಿದ ಅವರನ್ನು ಅಂಗರಕ್ಷಕರು ಕೂಡಲೇ ಹಿಡಿದೆತ್ತಿದ್ದಾರೆ. ಅದರಲ್ಲೂ ಈ ಹಿಂದೆಯೂ ಇದೇ ಊರಲ್ಲಿ ಅವರು ಒಮ್ಮೆ ಇದೇ ಥರ ಎಡವಿ ಕುಸಿದಿದ್ದರು! ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಇಂದು ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರ 60ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಅವರು ಮುಖ್ಯವೇದಿಕೆ ಹತ್ತಿ ಆಸನದ ಬಳಿ ತೆರಳುವ ವೇಳೆ ಘಟನೆ ನಡೆದಿದೆ. ಟೀಪಾಯಿ ಕೆಳಗೆ ಬಿದ್ದಿದ್ದ … Continue reading ಮತ್ತೆ ಆಯತಪ್ಪಿ ಎಡವಿದ ಮಾಜಿ ಸಿಎಂ; ಈ ಊರಲ್ಲಿ ಸಿದ್ದರಾಮಯ್ಯಗೆ ಇದೇನಿದು ಸಮಸ್ಯೆ?!