More

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್​ ಬಗ್ಗೆ ಸರ್ಕಾರ ಜನರಿಗೆ ಸತ್ಯ ಹೇಳಬೇಕು: ಮಾಜಿ ಸಿಎಂ ಎಚ್​ಡಿಕೆ

    ಮಂಗಳೂರು: ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್​ ಬಗ್ಗೆ ಸಾರ್ವಜನಿಕರಿಗೆ ಸತ್ಯ ತಿಳಿಸಬೇಕು ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ಇತ್ತೀಚೆಗೆ ಶಾಂತಿ ಕದಡಿದೆ. ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಗಲಭೆಯಿಂದ ಸಮುದಾಯಗಳ ನಡುವೆ ಬಿರುಕು ಮೂಡಿದೆ. ಈಗ ಪತ್ತೆಯಾಗಿರುವ ಸಜೀವ ಬಾಂಬ್​ ಇನ್ನಷ್ಟು ಭೀತಿಗೆ ಕಾರಣವಾಗಿದೆ. ಹೀಗಾಗಿ ಬಾಂಬ್​ ಬಗ್ಗೆ ಸರ್ಕಾರ ಜನರಿಗೆ ಸತ್ಯದ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

    ಬಾಂಬ್​ ಬಗ್ಗೆ ಕಟ್ಟುಕತೆಗಳು ಹುಟ್ಟಿಕೊಂಡಿವೆ. ಇದಕ್ಕೆ ತೆರೆ ಎಳೆಯಲು ಸರ್ಕಾರ ಸತ್ಯ ಹೇಳಬೇಕು. ಪಟಾಕಿ ಮದ್ದಿಗೆ ತುಂಡಾದ ವೈರುಗಳನ್ನು ಜೋಡಿಸಲಾಗಿದೆ ಎಂಬ ಅನುಮಾನ ಕಾಡುತ್ತಿದೆ. ಹೀಗಾಗಿ ತನಿಖೆ ನಡೆಸಿ ನಿಜ ಹೇಳಬೇಕೆಂದರು.

    ನಾನು ಸಿಎಂ ಆಗಿದ್ದಾಗ ರಾಮನಗರಲ್ಲಿ ಬಾಂಬ್​ ಪತ್ತೆ ಎಂದು ವರದಿ ಮಾಡಲಾಗಿತ್ತು. ಆದರೆ ಪರಿಶೀಲನೆ ನಡೆಸಿದಾಗ ಆನೆ ಪಟಾಕಿ ಎಂದು ತಿಳಿದು ಬಂತು. ಸರ್ಕಾರ ತನಿಖೆ ನಡೆಸಿ ಜನರ ಮುಂದೆ ನಿಜ ಹೇಳಬೇಕು ಎಂದು ಅವರು ಆಗ್ರಹಿಸಿದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts