ಮೇಯೋದಕ್ಕೆ ಬಿಟ್ಟಿದ್ದ ಆರು ಹಸುಗಳ ಪೈಕಿ ಐದರ ಸಾವು ನಿಗೂಢ

ಕೊಕ್ಕರ್ಣೆ: ನಾಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಚಾರು ಗ್ರಾಮದ ಅಂಬಾರಮಕ್ಕಿ ನಿವಾಸಿ ಹೈನುಗಾರ ಗಣಪತಿ ಅವರ ಮೇಯಲು ಬಿಟ್ಟ ಆರು ಹಸುಗಳ ಪೈಕಿ ಕಳೆದ ಒಂದು ವಾರದಿಂದ ಐದು ಹಸುಗಳು ಮೃತಪಟ್ಟಿದ್ದು, ಕಾರಣ ತಿಳಿದುಬಂದಿಲ್ಲ. ದಿನಂಪ್ರತಿ ಈ ಹಸುಗಳನ್ನು ಹತ್ತಿರದ ಹುಲ್ಲುಗಳಿರುವ ಜಾಗಗಳಲ್ಲಿ ಮೇಯಲು ಬಿಡುತ್ತಿದ್ದು, ವಿಷ ಪ್ರಾಶನದಿಂದ ಸಾವು ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಂತೆಕಟ್ಟೆ ಪಶುವೈದ್ಯಾಧಿಕಾರಿ ಡಾ.ಮಂಜುನಾಥ ಅಡಿಗ ಭೇಟಿ ನೀಡಿ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಯನ್ನು ಮಂಗಳೂರು ಲ್ಯಾಬ್‌ಗೆ … Continue reading ಮೇಯೋದಕ್ಕೆ ಬಿಟ್ಟಿದ್ದ ಆರು ಹಸುಗಳ ಪೈಕಿ ಐದರ ಸಾವು ನಿಗೂಢ