ಶ್ರೀ ಕಾಳಿಕಾ ದೇವಸ್ಥಾನದ ಪ್ರಥಮ ವರ್ಧಂತ್ಯೋತ್ಸವ ಸಂಪನ್ನ

blank

ಹುಬ್ಬಳ್ಳಿ : ನವನಗರದ ಪಂಚಾಕ್ಷರಿ ನಗರದಲ್ಲಿ ನಿಮಿರ್ಸಲಾಗಿರುವ ಶ್ರೀ ಕಾಳಿಕಾ ದೇವಸ್ಥಾನದ ಪ್ರಥಮ ವರ್ಧಂತ್ಯೋತ್ಸವ ಸಂಪನ್ನಗೊಂಡಿತು.
ಶ್ರೀ ವಿಶ್ವಕರ್ಮ ಕಾಳಿಕಾದೇವಿ ಹಾಗೂ ಶ್ರೀ ಗಣೇಶ ದೇವರಿಗೆ ಪಂಚಾಮೃತ ಅಭಿಷೇಕ, ನಂತರ ಪುರೋಹಿತ ಶ್ರೀ ಸೋಮಾಚಾರ್ಯ ಕಡ್ಲಾಸ್ಕರ ಅವರ ನೇತೃತ್ವದಲ್ಲಿ ನವಗ್ರಹ ಹಾಗೂ ದುರ್ಗಾ ಹೋಮ ಹಾಗೂ ನಾಗದೇವತಾ ಪ್ರತಿಷ್ಠಾಪನೆ ಜರುಗಿದವು.

blank

ಮಹಾಪೌರ ರಾಮಪ್ಪ ಬಡಿಗೇರ, ಉದ್ಯಮಿ ಸುರೇಶ ಸೇಜವಾಡಕರ, ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಪಿ. ಈರಣ್ಣ, ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ ಪತ್ತಾರ, ವರವಿ ಶ್ರೀ ಮೌನೇಶ್ವರ ಕ್ಷೇತ್ರದ ಆಡಳಿತ ಮಂಡಳಿ ಮಂಡಳಿ ಸದಸ್ಯ ನಿರಂಜನ ಬಡಿಗೇರ, ಮನೋಹರ ಲಕ್ಕುಂಡಿ, ಮಹಾರುದ್ರ ಬಡಿಗೇರ ಹಾಗೂ ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ ಅತಿಥಿಗಳಾಗಿದ್ದರು.

ನವಲಗುಂದದ ಅಜಾತ ಶ್ರೀ ನಾಗಲಿಂಗ ಮಹಾಸ್ವಾಮಿಗಳವರ ಮಠದ ಪೀಠಾಧಿಕಾರಿ ಶ್ರೀ ವೀರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ವಿಶ್ವಕರ್ಮ ವಿಕಾಸ ಸಮಿತಿ ಟ್ರಸ್ಟ್​ ಅಧ್ಯಕ್ಷ ಸಿ.ಪಿ. ಮಾಯಾಚಾರಿ ಅಧ್ಯಕ್ಷತೆ ವಹಿಸಿದ್ದರು.

ವಿಜಯಕುಮಾರ್​ ಅಪ್ಪಾಜಿ, ಡಾ. ಕುಮಾರ ಸಮರ್ಥ, ನಂದಿತಾ ಕುಂದಣಗಾರ, ಅರ್ಚನಾ ಬರೋಡ, ಅಶೋಕ ಬೆಳ್ಳಿಗಟ್ಟಿ, ಹನುಮೇಶ ಪತ್ತಾರ, ಮಹೇಶ ಕಮ್ಮಾರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವಿಶ್ವ ಚೇತನ ಮಹಿಳಾ ಮಂಡಳದ ಅಧ್ಯಕ್ಷೆ ಮೀನಾಕ್ಷಿ ಬಡಿಗೇರ, ವಿಶ್ವಕರ್ಮ ಯುವಕ ಮಂಡಳದ ಅಧ್ಯಕ್ಷ ಮೌನೇಶ ರಟ್ಟಿಹಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…