ಹುಬ್ಬಳ್ಳಿ : ನವನಗರದ ಪಂಚಾಕ್ಷರಿ ನಗರದಲ್ಲಿ ನಿಮಿರ್ಸಲಾಗಿರುವ ಶ್ರೀ ಕಾಳಿಕಾ ದೇವಸ್ಥಾನದ ಪ್ರಥಮ ವರ್ಧಂತ್ಯೋತ್ಸವ ಸಂಪನ್ನಗೊಂಡಿತು.
ಶ್ರೀ ವಿಶ್ವಕರ್ಮ ಕಾಳಿಕಾದೇವಿ ಹಾಗೂ ಶ್ರೀ ಗಣೇಶ ದೇವರಿಗೆ ಪಂಚಾಮೃತ ಅಭಿಷೇಕ, ನಂತರ ಪುರೋಹಿತ ಶ್ರೀ ಸೋಮಾಚಾರ್ಯ ಕಡ್ಲಾಸ್ಕರ ಅವರ ನೇತೃತ್ವದಲ್ಲಿ ನವಗ್ರಹ ಹಾಗೂ ದುರ್ಗಾ ಹೋಮ ಹಾಗೂ ನಾಗದೇವತಾ ಪ್ರತಿಷ್ಠಾಪನೆ ಜರುಗಿದವು.

ಮಹಾಪೌರ ರಾಮಪ್ಪ ಬಡಿಗೇರ, ಉದ್ಯಮಿ ಸುರೇಶ ಸೇಜವಾಡಕರ, ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಪಿ. ಈರಣ್ಣ, ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ ಪತ್ತಾರ, ವರವಿ ಶ್ರೀ ಮೌನೇಶ್ವರ ಕ್ಷೇತ್ರದ ಆಡಳಿತ ಮಂಡಳಿ ಮಂಡಳಿ ಸದಸ್ಯ ನಿರಂಜನ ಬಡಿಗೇರ, ಮನೋಹರ ಲಕ್ಕುಂಡಿ, ಮಹಾರುದ್ರ ಬಡಿಗೇರ ಹಾಗೂ ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ ಅತಿಥಿಗಳಾಗಿದ್ದರು.
ನವಲಗುಂದದ ಅಜಾತ ಶ್ರೀ ನಾಗಲಿಂಗ ಮಹಾಸ್ವಾಮಿಗಳವರ ಮಠದ ಪೀಠಾಧಿಕಾರಿ ಶ್ರೀ ವೀರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ವಿಶ್ವಕರ್ಮ ವಿಕಾಸ ಸಮಿತಿ ಟ್ರಸ್ಟ್ ಅಧ್ಯಕ್ಷ ಸಿ.ಪಿ. ಮಾಯಾಚಾರಿ ಅಧ್ಯಕ್ಷತೆ ವಹಿಸಿದ್ದರು.
ವಿಜಯಕುಮಾರ್ ಅಪ್ಪಾಜಿ, ಡಾ. ಕುಮಾರ ಸಮರ್ಥ, ನಂದಿತಾ ಕುಂದಣಗಾರ, ಅರ್ಚನಾ ಬರೋಡ, ಅಶೋಕ ಬೆಳ್ಳಿಗಟ್ಟಿ, ಹನುಮೇಶ ಪತ್ತಾರ, ಮಹೇಶ ಕಮ್ಮಾರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವಿಶ್ವ ಚೇತನ ಮಹಿಳಾ ಮಂಡಳದ ಅಧ್ಯಕ್ಷೆ ಮೀನಾಕ್ಷಿ ಬಡಿಗೇರ, ವಿಶ್ವಕರ್ಮ ಯುವಕ ಮಂಡಳದ ಅಧ್ಯಕ್ಷ ಮೌನೇಶ ರಟ್ಟಿಹಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.