ತಮಿಳುನಾಡಿಗೆ ಚಿನ್ನಮ್ಮ ಹೋಗುತ್ತಿದ್ದ ವೇಳೆ ಅವಘಡ, ಹೊತ್ತಿ ಉರಿದ 2 ಕಾರುಗಳು

ಬೆಂಗಳೂರು: ನಾಲ್ಕು ವರ್ಷದ ಬಳಿಕ ಬೆಂಗಳೂರಿಂದ ತಮಿಳುನಾಡಿಗೆ ಹೊರಟ ಶಶಿಕಲಾ ಅಲಿಯಾಸ್​ ಚಿನ್ನಮ್ಮಳನ್ನು ಸ್ವಾಗತಿಸಲು ಬಂದಿದ್ದ ಬೆಂಬಲಿಗರ ಎರಡು ಕಾರುಗಳು ಮಾರ್ಗಮಧ್ಯೆ ಹೊತ್ತಿ ಉರಿದಿವೆ. ಅಕ್ರಮ ಆಸ್ತಿ ಗಳಿಕೆಗೆ ಸಂಬಂಧ 4 ವರ್ಷ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದ ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ.ಕೆ. ಶಶಿಕಲಾ ಇಂದು(ಸೋಮವಾರ) ಬೆಳಗ್ಗೆ ತಮಿಳುನಾಡಿಗೆ ಪ್ರಯಾಣ ಬೆಳೆಸಿದರು. ದಾರಿಯುದ್ದಕ್ಕೂ ಶಶಿಕಲಾರನ್ನ ಸ್ವಾಗತಿಸಲು ಅಭಿಮಾನಿಗಳು ಕಟೌಟ್​ಗಳನ್ನು ಕಟ್ಟಿ, ಪಟಾಕಿ ಸಿಡಿಸಿದರು. ರಸ್ತೆಯ ಹಲವೆಡೆ ಅಮ್ಮಾ ಮಕ್ಕಳ್ … Continue reading ತಮಿಳುನಾಡಿಗೆ ಚಿನ್ನಮ್ಮ ಹೋಗುತ್ತಿದ್ದ ವೇಳೆ ಅವಘಡ, ಹೊತ್ತಿ ಉರಿದ 2 ಕಾರುಗಳು