firefly movie review: ನೆಮ್ಮದಿಯ ಹುಡುಕಾಟದಲ್ಲೊಂದು ನಿರಾಳ ನಿಲ್ದಾಣ

blank

ಚಿತ್ರ: ಫೈರ್‌ಪ್ಲೈ
ನಿರ್ದೇಶನ: ವಂಶಿಕೃಷ್ಣ
ನಿರ್ಮಾಣ: ನಿವೇದಿತಾ ಶಿವರಾಜಕುಮಾರ್
ತಾರಾಗಣ: ವಂಶಿಕೃಷ್ಣ, ರಚನಾ ಇಂದರ್, ಅಚ್ಯುತ್ ಕುಮಾರ್, ಸುಧಾರಾಣಿ, ಮೂಗು ಸುರೇಶ್, ಶೀತಲ್ ಶೆಟ್ಟಿ ಮತ್ತಿತರರು.

blank

ಶಿವ ಸ್ಥಾವರಮಠ
ಒಂಟಿತನ, ಖಿನ್ನತೆ ಮನುಷ್ಯನನ್ನು ಬಹಳ ದುಃಖಕ್ಕೆ ಕೆಡವಿ ಬಿಡುತ್ತವೆ. ಇದರಿಂದ ಹೊರಬರಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಆಗ ನೆಮ್ಮದಿಯ ಹುಡುಕಾಟಕ್ಕೆ ಮುಂದಾಗುತ್ತೇವೆ. ಎಷ್ಟೇ ಹುಡುಕಾಡಿ, ತಡಕಾಡಿದರೂ ಅದು ಸುಲಭವಾಗಿ ಸಿಗುವುದಿಲ್ಲ. ನಿರಂತರವಾಗಿ ಪ್ರಯತ್ನಿಸುತ್ತೇವೆ. ಕೊನೆಗೊಂದು ದಿನ ನೆಮ್ಮದಿ ಸಿಗುತ್ತದೆ. ಆಗ ಅಯ್ಯೋ, ಇಷ್ಟು ದಿನ ಇದು ನನ್ನಲ್ಲಿಯೇ ಇತ್ತಾ? ನಾನೋ ಎಲ್ಲೆಲ್ಲೋ ಹುಡುಕಾಡಿದೆ ಎಂದೆನಿಸಿ, ನಿಟ್ಟುಸಿರು ಬಿಡುತ್ತೇವೆ. ಈ ರೀತಿಯ ವಿಶಿಷ್ಟ ಅನುಭವ ಆಗುವುದು ‘‘ಫೈರ್‌ಪ್ಲೈ’ ಸಿನಿಮಾ ನೋಡಿದಾಗ.

ಇಲ್ಲಿ ವಿವೇಕಾನಂದ ಮೂರ್ತಿ ಅಲಿಯಾಸ್ ವಿಕ್ಕಿ (ವಂಶಿಕೃಷ್ಣ) ಎಂಬ ಹುಡುಗನಿದ್ದಾನೆ. ಈತ ನಾಲ್ಕು ವರ್ಷಗಳ ಬಳಿಕ ತಂದೆ-ತಾಯಿಯನ್ನು ಭೇಟಿ ಮಾಡಿದ್ದಾನೆ. ತುಂಬಾ ದಿನಗಳ ಭೇಟಿಯಲ್ಲಿ ಆತ ತಂದೆ-ತಾಯಿಯೊಂದಿಗೆ ಮಾತಾಡಿದ್ದು, ನಾಲ್ಕೇ ನಾಲ್ಕು ಮಾತು. ಇನ್ನೊಂದು ಮಾತು ಆಡುವಷ್ಟರಲ್ಲಿ ಅಪಘಾತ ಸಂಭವಿಸಿ, ತಂದೆ-ತಾಯಿ ದುರ್ಮರಣಕ್ಕೀಡಾಗುತ್ತಾರೆ. ಬದುಕುಳಿಯುವ ವಿಕ್ಕಿ ಆರು ತಿಂಗಳ ಕಾಲ ಕೋಮಾದಲ್ಲಿರುತ್ತಾನೆ. ಬಳಿಕ ಆ ಆಘಾತದಿಂದ ಮರಳುವುದೇ ಆತನಿಗೆ ಸವಾಲು. ಒಂಟಿತನ ಕಾಡುತ್ತದೆ, ಖಿನ್ನತೆಗೊಳಗಾಗುತ್ತಾನೆ. ಒಂದು ಸುಖವಾದ ನಿದ್ದೆಗಾಗಿ ಹಾತೊರೆಯುತ್ತಾನೆ, ನಗುವಿಗಾಗಿ ಹರಸಾಹಸ ಪಡುತ್ತಾನೆ. ಇಂತಹ ಸಾಹಸಗಳ ಮುಂದುವರಿದ ಕಥೆಯೇ ‘ಫೈರ್‌ಪ್ಲೈ’

firefly movie review: ನೆಮ್ಮದಿಯ ಹುಡುಕಾಟದಲ್ಲೊಂದು ನಿರಾಳ ನಿಲ್ದಾಣ

ವಂಶಿಕೃಷ್ಣ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ಕಥೆಯಲ್ಲಿ ತಾಜಾತನವಿದ್ದು, ಕಲಾತ್ಮಕವಾಗಿ ನಿರೂಪಿಸಿದ್ದಾರೆ. ವಿಶಿಷ್ಠ ಕಥಾವಸ್ತುವನ್ನು ಅನುಭವಕ್ಕೆ ದಕ್ಕುವ ಹಾಗೆ ನಿರೂಪಿಸಿದ್ದಾರೆ. ಸಿದ್ಧ ಮಾದರಿಗಳನ್ನು ಹೊರಗಿಟ್ಟು ಹೊಸ ತಂತ್ರಗಳನ್ನು ಹೆಣೆದಿದ್ದಾರೆ. ಹೀಗಾಗಿ, ಕಥೆ ಇಷ್ಟವಾಗುತ್ತದೆ. ಹೀಗಾಗಿ ಚೊಚ್ಚಲ ನಿರ್ದೇಶನದಲ್ಲಿ ವಂಶಿಕೃಷ್ಣ ಭರವಸೆ ಮೂಡಿಸಿದ್ದಾರೆ. ಜತೆಗೆ ನಟನೆಯಲ್ಲೂ ಅವರು ಛಾಪು ಮೂಡಿಸಿದ್ದು, ಇಡೀ ಕಥೆಯನ್ನು ಆವರಿಸಿಕೊಂಡು, ಪ್ರತಿ ದೃಶ್ಯದಲ್ಲೂ ಅವರೇ ಕಾಣಿಸಿಕೊಳ್ಳುತ್ತಾರೆ. ಎಮೋಷನ್ ಕ್ಯಾರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಚ್ಯುತ ಕುಮಾರ್, ಸುಧಾರಾಣಿ ಪಾತ್ರಗಳು ಗಮನಸೆಳೆಯುತ್ತವೆ. ರಚನಾ ಇಂದರ್ ಸ್ಕ್ರೀನ್ ಸ್ಪೇಸ್ ಕಡಿಮೆ ಅನಿಸಿದರೂ, ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಕಥೆಯ ಕ್ಲೈಮ್ಯಾಕ್ಸ್‌ನಲ್ಲಿ ಮೂಗು ಸುರೇಶ್ ಕೇಂದ್ರಬಿಂದುವಾಗುತ್ತಾರೆ. ಅವರ ನಟನೆ ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತದೆ. ಚಿತ್ರದ ಕಲಾತ್ಮಕ ದೃಶ್ಯಗಳು ಪ್ಲಸ್ ಪಾಯಿಂಟ್. ರಘು ನಿಡುವಳ್ಳಿ ಸಂಭಾಷಣೆ ಆಪ್ತವಾಗಿದೆ. ಚರಣ್ ರಾಜ್ ಸಂಗೀತ ಇಂಪಾಗಿದ್ದು, ಅಭಿಲಾಶ್ ಛಾಯಾಗ್ರಹಣ ಕಥೆಗೆ ಪೂರಕವಾಗಿದೆ.

Share This Article

ಬೇಸಿಗೆಯಲ್ಲಿ ಪಿತ್ತಕೋಶ ಸಮಸ್ಯೆ ಹೆಚ್ಚಳ

| ಪಂಕಜ ಕೆ.ಎಂ., ಬೆಂಗಳೂರು ಬಿಸಿಲ ಝುಳ ಹೆಚ್ಚಾಗಿದ್ದರೂ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿರುವ ಜನರು…

ಹೀಗೆ ಮಾಡಿದರೆ ಇಲಿಗಳು ನಿಮ್ಮ ಮನೆಯ ಹತ್ತಿರವೂ ಬರುವುದಿಲ್ಲ! rats

rats: ಮನೆಯಲ್ಲಿ ಇಲಿಗಳ ಸಂಖ್ಯೆ ಹೆಚ್ಚಾದರೆ, ದೈನಂದಿನ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ. ನಾವು ಕೆಲವು ನೈಸರ್ಗಿಕ…

ಒಂದು ವಾರ ಉಪ್ಪು ತಿನ್ನುವುದನ್ನು ನಿಲ್ಲಿಸಿದರೆ ಏನಾಗುತ್ತದೆ ಗೊತ್ತಾ? salt

salt : ಉಪ್ಪು ಇಲ್ಲದೆ ಬಹುತೇಕ ಎಲ್ಲಾ ರೀತಿಯ ಭಕ್ಷ್ಯಗಳು ಅಪೂರ್ಣ.  ಉಪ್ಪು ತಿನ್ನುವುದರಿಂದಲೂ ಹಲವು…