ಬೆಂಗಳೂರು: ಪ್ರತ್ಯೇಕ ಘಟನೆಗಳಲ್ಲಿ ಜನನಿಬಿಡ ಪ್ರದೇಶದಲ್ಲಿರುವ ವಾಣಿಜ್ಯ ಕಟ್ಟಡಗಳಿಗೆ ಬೆಂಕಿ ತಗುಲಿದ್ದು ಕೆಲ ಸಮಯದಲ್ಲೇ ವ್ಯಾಪಕವಾಗಿ ಹರಡಿದೆ.
ನಗರದ ಚಿಕ್ಕಪೇಟೆಯಲ್ಲಿರುವ ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯಲ್ಲಿರುವ ಪದ್ಮಶ್ರೀ ಸಿಲ್ಕ್ ಅಂಡ್ ಸ್ಯಾರಿಸ್ ಅಂಗಡಿ ಮೇಲ್ಭಾಗದಲ್ಲಿರುವ ಮೊಬೈಲ್ ಟವರ್ಗೆ ಬೆಂಕಿ ಹೊತ್ತಿಕೊಂಡಿದ್ದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಲ್ಲೇಶ್ವರಂ 7ನೇ ಕ್ರಾಸ್ನಲ್ಲಿರುವ ಕರೆಂಟ್ ಕಂಬದ ಫಯ್ಊಸ್ ಬಾಕ್ಸ್ನಲ್ಲಿ ಬಂಕಿ ಕಾಣಿಸಿಕೊಂಡಿದ್ದು ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಅವಘಡವನ್ನು ತಪ್ಪಿಸಿದ್ದಾರೆ.