ಸ್ಫಟಿಕ ಲಿಂಗ ಕಳವು ಪ್ರಕರಣ; ಪತ್ತೆ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ವಿಶ್ವ ಹಿಂದು ಪರಿಷತ್ ಎಚ್ಚರಿಕೆ

ಹಾವೇರಿ: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಲಿಂಗದಹಳ್ಳಿಯ ಹಿರೇಮಠದಲ್ಲಿನ ಸ್ಫಟಿಕ ಲಿಂಗ ಕಳವಾಗಿ ವಾರವಾಗುತ್ತ ಬಂದರೂ ಇನ್ನೂ ಪತ್ತೆಯಾಗದ್ದರಿಂದ ಅಸಮಾಧಾನಗೊಂಡಿರುವ ವಿಶ್ವ ಹಿಂದು ಪರಿಷತ್, ಲಿಂಗ ಪತ್ತೆಯಾಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ದಕ್ಷಿಣ ಭಾರತದ ಪುರಾತನ ಸ್ಫಟಿಕ ಲಿಂಗ ಎನಿಸಿಕೊಂಡಿರುವ ಇದು ಇದೇ ತಿಂಗಳ 7ರಂದು ಕಳವಾಗಿದ್ದು, ಈ ಕುರಿತು ರಾಣೆಬೆನ್ನೂರು ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಕುರಿತು ಮಠದ ಶ್ರೀಗಳು ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಲಾಗಿದ್ದು, ಮಠಾಧೀಶ ಶಿವಾಚಾರ್ಯ ಸ್ವಾಮೀಜಿ ಅವರಿಂದ ತನಿಖಾ ತಂಡ … Continue reading ಸ್ಫಟಿಕ ಲಿಂಗ ಕಳವು ಪ್ರಕರಣ; ಪತ್ತೆ ಮಾಡದಿದ್ದರೆ ಪ್ರತಿಭಟನೆ ಮಾಡುವುದಾಗಿ ವಿಶ್ವ ಹಿಂದು ಪರಿಷತ್ ಎಚ್ಚರಿಕೆ