ಹಬ್ಬದ ಮಹತ್ವ ಅರಿತು ಆಚರಿಸಿ

blank

ಸಿರವಾರ: ದೀಪ ಬೆಳಗಿಸುವ ಮೂಲಕ ಜಗದ ಕತ್ತಲು ಕಳೆದು ಬೆಳಕಿನೆಡೆಗೆ ಸಾಗೋಣ. ಮನೆ-ಮನದಲ್ಲಿ ದೀಪ ಬೆಳಗಿಸುವ ಕೆಲಸ ಮಾಡಬೇಕು ಎಂದು ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

blank

ಪಟ್ಟಣದ ಸಜ್ಜಲಶ್ರೀ ಶರಣಮ್ಮ ಆಶ್ರಮದಲ್ಲಿ ವೀರ ಸಾವರ್ಕರ್ ಯುವ ಸೇನೆ ಪ್ರತಿಷ್ಠಾಪನೆಯಿಂದ ಆಯೋಜಿಸಿದ್ದ ಗಣೇಶ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ದೀಪದ ಬೆಳಕಿನಿಂದ ನಮ್ಮಲ್ಲಿರುವ ಅಂಧಕಾರವನ್ನು ದೂರ ಮಾಡಬೇಕು. ಹಿಂದು ಸಂಪ್ರದಾಯದಂತೆ ಪ್ರತಿಯೊಂದು ಹಬ್ಬಕೂ ತನ್ನದೇಯಾದ ವಿಶೇಷ ಇದೆ. ಈ ಮಾಹಿತಿ ಅರಿತು ಹಬ್ಬ- ಹರಿದಿನಗಳನ್ನು ಆಚರಣೆ ಮಾಡುತ್ತ ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.

ಪ್ರಮುಖರಾದ ಪ್ರಕಾಶ ಪಾಟೀಲ್, ಸಂದೀಪ್ ಪಾಟೀಲ್, ಡಿ.ಯಮನೂರು, ಯಲ್ಲಪ್ಪ ದೊರೆ ಇತರರಿದ್ದರು. ಬೆಳಗ್ಗೆ ಮಹಾಗಣ ಹೋಮ ನಡೆಸಲಾಯಿತು.

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank