ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಲ್ಲರನ್ನೂ ಅಗಲಿ ಎರಡು ತಿಂಗಳು ಕಳೆದರೂ ಅವರ ಮೇಲಿನ ಅಭಿಮಾನ ಒಂಚೂರೂ ತಗ್ಗಿಲ್ಲ, ಕುಗ್ಗಿಲ್ಲ ಎನ್ನುವುದಕ್ಕೆ ಅವರ ಪುಣ್ಯಭೂಮಿ ಬಳಿ ಜಮಾಯಿಸುತ್ತಿರುವ ಜನರೇ ನಿದರ್ಶನ.
2020ರ ಅಕ್ಟೋಬರ್ 29ರಂದು ಪುನೀತ್ ರಾಜಕುಮಾರ್ ಅವರು ನಿಧನರಾದರು. ಅದಾಗಿ ಇದೀಗ ಎರಡು ತಿಂಗಳು ಕಳೆದಿವೆ. ಆದರೂ ಪುಣ್ಯಭೂಮಿ ಬಳಿ ಅಭಿಮಾನಿಗಳು ಬಂದು ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿ ಹೋಗುತ್ತಲೇ ಇದ್ದಾರೆ.
ಇದನ್ನೂ ಓದಿ: ಕಾರು-ಬಸ್ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಮೂವರ ಸಾವು, ಐವರಿಗೆ ಗಾಯ…
ಈ ಕುರಿತು ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಅವರೇ ತಮ್ಮ ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ಅವರು ಅಪ್ಪು ಪುಣ್ಯಭೂಮಿ ಬಳಿಗೆ ಹೋಗಿದ್ದ ದೃಶ್ಯವನ್ನು ಕಂಡು, ಅದರ ವಿಡಿಯೋ/ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ, ’63 ದಿನಗಳ ಬಳಿಕವೂ ಅಪ್ಪು ಪುಣ್ಯಭೂಮಿಗೆ ಅಭಿಮಾನಿಗಳು ಈ ಸಂಖ್ಯೆಯಲ್ಲಿ ಸೇರುತ್ತಿರುವುದು ವಿಶೇಷ. ನೆಚ್ಚಿನ ಅಭಿಮಾನಿ ದೇವರುಗಳಿಗೆ ನನ್ನ ವಂದನೆಗಳು’ ಎಂದು ಹೇಳಿಕೊಂಡಿದ್ದಾರೆ.
ಸಾವಿರಾರು ಜನರ ಖಾತೆಗೆ ಬಂದು ಬಿತ್ತು ಭಾರಿ ಹಣ!; 75 ಸಾವಿರ ಖಾತೆಗಳಿಗೆ ಒಟ್ಟು 1,310 ಕೋಟಿ ರೂ. ಜಮೆ…