ಬೆಳಗಾವಿ: ಜಿಲ್ಲೆಯ 18ವಿಧಾಮಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆ ಮತದಾನ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಂಚೆ ಮತದಾನ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಅಭಯ ಪಾಟೀಲ, ಹುಕ್ಕೇರಿ ನಿಖಿಲ್ ಕತ್ತಿ, ಬೆಳಗಾವಿ ಉತ್ತರ ಡಾ.ರವಿ ಪಾಟೀಲ, ಅರಬಾವಿ ಬಾಲಚಂದ್ರ ಜಾರಕಿಹೊಳಿ, ಬೈಲಹೊಂಗಲ ಜಗದೀಶ ಮೆಟಗುಡ್ಡ, ಕಿತ್ತೂರು ಮಹಾಂತೇಶ ದೊಡ್ಡಗೌಡರ, ಕುಡಚಿ ಪಿ.ರಾಜೀವ ಮುನ್ನಡೆ ಸಾಧಿಸಿದ್ದಾರೆ.
ಇನ್ನೂ ಕಾಂಗ್ರೆಸ್ ಯಮಕನಮರಡಿ ಸತೀಶ ಜಾರಕಿಹೊಳಿ, ಗೋಕಾಕ ಮಹಾಂತೇಶ ಕಡಾಡಿ, ಕಾಗವಾಡ ರಾಜು ಕಾಗೆ, ಅಥಣಿ ಲಕ್ಷ್ಮಣ ಸವದಿ, ಬೆಳಗಾವಿ ಗ್ರಾಮೀಣ ಲಕ್ಷೀ ಹೆಬ್ಬಾಳ್ಕರ್ ಮುನ್ನಡೆಯಲ್ಲಿದ್ದಾರೆ.