ಸಂಪಾದಕೀಯ; ಆಂತರಿಕ ಸುರಕ್ಷೆ ಮುಖ್ಯ

blank

ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಕೂಡಲೇ ಐದು ಕ್ರಮಗಳನ್ನು ಪ್ರಕಟಿಸಿತು. ಈ ಪೈಕಿ, ಇಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳು ದೇಶ ತೊರೆಯಬೇಕು ಎಂಬುದು ಪ್ರಮುಖವಾದುದು. ಪಾಕಿಸ್ತಾನ ಪ್ರಜೆಗಳು ದೇಶ ತೊರೆಯಬೇಕಾದ ಅವಧಿ ಭಾನುವಾರಕ್ಕೆ ಅಂತ್ಯಗೊಂಡಿದೆ. ಭಾನುವಾರ ಒಂದೇ ದಿನ 500ಕ್ಕೂ ಹೆಚ್ಚು ಪಾಕ್ ನಾಗರಿಕರು ಅವರ ದೇಶಕ್ಕೆ ಮರಳಿದ್ದಾರೆ. ಈ ಮಧ್ಯೆ ಕೇರಳದಲ್ಲಿ ನೆಲೆಸಿರುವ ನೂರಕ್ಕೂ ಹೆಚ್ಚು ಪಾಕ್ ಪ್ರಜೆಗಳಿಗೆ ಭಾರತ ದೇಶ ತೊರೆಯುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೆ, ವೀಸಾ ಕಾಲಾವಧಿ ಮುಗಿದರೂ 62 ಮಂದಿ ಇನ್ನೂ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಮಾತ್ರವಲ್ಲ ದೀರ್ಘಾವಧಿ ವೀಸಾ ಪಡೆದವರು ಕೂಡ ಇನ್ನೂ ಭಾರತ ತೊರೆದಿಲ್ಲ ಎಂಬ ಮಾಹಿತಿಗಳಿವೆ. ಆದರೆ, ಇನ್ನೂ ಕೆಲವರು ತಲೆಮರೆಸಿಕೊಂಡು ನೆಲೆಸಿರುವ ಸಾಧ್ಯತೆ ಇದೆ.

blank

ಪಹಲ್ಗಾಮ್ ದಾಳಿಯ ನಂತರ ಇಡೀ ದೇಶ ಆಕ್ರೋಶಗೊಂಡಿದೆ. ಈ ದಾಳಿಯ ಹಿಂದೆಯೂ ಪಾಕಿಸ್ತಾನದ ಕೈವಾಡ ದೃಢಪಟ್ಟಿರುವುದರಿಂದ ಕಠಿಣ ಕ್ರಮ ಅನಿವಾರ್ಯ. ಪ್ರಧಾನಿ ನರೇಂದ್ರ ಮೋದಿ ಬಿಹಾರದ ಜನಸಭೆಯಲ್ಲಿ ಹೇಳಿದ್ದ ಮಾತುಗಳನ್ನು ‘ಮನ್ ಕೀ ಬಾತ್’ ಬಾನುಲಿ ಕಾರ್ಯಕ್ರಮದಲ್ಲಿ ಪುನರುಚ್ಚರಿಸಿದ್ದು, ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಮತ್ತೊಂದೆಡೆ, ಗುಜರಾತ್ ರಾಜ್ಯವೊಂದರಲ್ಲೇ ಸಾವಿರಕ್ಕೂ ಅಧಿಕ ಬಾಂಗ್ಲಾದೇಶದ ನುಸುಳುಕೋರರು ಪತ್ತೆಯಾಗಿರುವುದು ಗಂಭೀರ ವಿಚಾರ. ಪೊಲೀಸರು ಅಹಮದಾಬಾದ್ ಮತ್ತು ಸೂರತ್ ನಗರಗಳಲ್ಲಿ ಕಾರ್ಯಾಚರಣೆ ನಡೆಸಿ ಇವರನ್ನು ವಶಕ್ಕೆ ಪಡೆದಿದ್ದಾರೆ. ಮಾತ್ರವಲ್ಲ, ಈ ಪೈಕಿ ಅನೇಕ ಜನರು ಮಾದಕದ್ರವ್ಯ ಕಳ್ಳಸಾಗಾಣಿಕೆ ಮತ್ತು ಮಾನವ ಕಳ್ಳಸಾಗಾಟ ಜಾಲಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ‘ಈ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಗುಜರಾತ್​ನ ಗೃಹ ರಾಜ್ಯ ಸಚಿವ ಹರ್ಷ್ ಸಂಘ್ವಿ ಹೇಳಿದ್ದಾರೆ.

ಅಕ್ರಮ ವಲಸಿಗರು ತಾವಾಗೇ ಪೊಲೀಸರ ಮುಂದೆ ಶರಣಾಗಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ. ಇದು ದೇಶದ ಆಂತರಿಕ ಸುರಕ್ಷೆಯನ್ನು ಬಲಪಡಿಸಬೇಕಾದ ಸಮಯ. ಹೀಗಾಗಿ, ಯಾವುದೇ ದಯೆ, ದಾಕ್ಷಿಣ್ಯ ಇಲ್ಲದೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಾಗರಿಕರನ್ನು ಅವರ ದೇಶಕ್ಕೆ ಕಳುಹಿಸಬೇಕು. ಭಾರತ ಧರ್ಮಶಾಲೆಯಲ್ಲ. ನುಸುಳುಕೋರರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು, ಇಲ್ಲಿ ಆಶ್ರಯ ಪಡೆದು ಭಾರತವಿರೋಧಿ ಕೃತ್ಯಗಳಿಗೆ ಕೈಜೋಡಿಸುವುದು ಹೊಸದೇನಲ್ಲ. ಪಹಲ್ಗಾಮ್ ದಾಳಿಯ ಬಳಿಕವಾದರೂ ಪಾಠ ಕಲಿಯಬೇಕಿದೆ. ಪಶ್ಚಿಮ ಬಂಗಾಳದಲ್ಲಿ ನುಸುಳುಕೋರರ ಹಾವಳಿ ವಿಪರೀತ ಮಟ್ಟದಲ್ಲಿದೆ. ಇಂಥ ಸೂಕ್ಷ್ಮ ವಿಷಯದಲ್ಲಾದರೂ ರಾಜ್ಯ ಸರ್ಕಾರಗಳು ರಾಜಕೀಯ ಮಾಡದೆ ದೇಶದ ಆಂತರಿಕ ಭದ್ರತೆ ಬಲಪಡಿಸುವತ್ತ ಕೇಂದ್ರದ ಕ್ರಮಗಳಿಗೆ ಸಹಕರಿಸಬೇಕು. ಇಡೀ ದೇಶವನ್ನು ನುಸುಳುಕೋರರಿಂದ ಮುಕ್ತಗೊಳಿಸಲು ಆ ಮೂಲಕ ದೇಶವನ್ನು ಶುದ್ಧೀಕರಣಗೊಳಿಸಲು ಇದು ಸರಿಯಾದ ಸಮಯ ಎಂಬುದನ್ನು ಮರೆಯುವಂತಿಲ್ಲ.

 

Share This Article

ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water

Drinking water:ಸಾಮಾನ್ಯವಾಗಿ ನೀರು ಕುಡಿಯವುದರಿಂದ ಅನೇಕ ರೋಗದ ಸಮಸ್ಯೆಗಳು ದೂರುವಾಗುತ್ತದೆ. ಅಲ್ಲದೆ, ಆರೋಗ್ಯಕ್ಕೆ ಊಟ ಎಷ್ಟು…

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…