ಪರಿಹಾರೋಪಾಯ ಮುಖ್ಯ; ತಂತ್ರಜ್ಞಾನ ಬಳಕೆ ಹೆಚ್ಚಬೇಕು..

blank

ಸಾರ್ವಜನಿಕ ಸಮಸ್ಯೆಗಳು ಎನ್ನುವಂಥವು ಎಲ್ಲ ಕಾಲಕ್ಕೂ, ಎಲ್ಲ ಆಡಳಿತಗಳಲ್ಲೂ ಇರುವಂಥವು. ಸಮಸ್ಯೆಗಳ ಸ್ವರೂಪ ಬದಲಾಗಬಹುದೇ ಹೊರತು ಸಮಸ್ಯೆಗಳೇ ಇಲ್ಲ ಎನ್ನುವ ವಾತಾವರಣ ಕಷ್ಟ. ಆದರೆ ಆಯಾ ಕಾಲಘಟ್ಟದ ಸರ್ಕಾರಗಳು ಜನರ ಸಮಸ್ಯೆಗಳನ್ನು ಪರಿಹರಿಸಲು ಎಷ್ಟರಮಟ್ಟಿಗೆ ಆದ್ಯತೆ ನೀಡುತ್ತವೆ; ಈ ದಿಕ್ಕಿನಲ್ಲಿ ಯಾವ್ಯಾವ ವಿಧಾನಗಳನ್ನು ಹುಡುಕಿಕೊಂಡಿವೆ ಮತ್ತು ಈ ಕ್ರಮಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬ ಸಂಗತಿಗಳು ಮುಖ್ಯವಾಗುತ್ತವೆ. ಕೇಂದ್ರ ಸರ್ಕಾರ, ಸಾರ್ವಜನಿಕರ ಕುಂದುಕೊರತೆ, ದೂರುಗಳನ್ನು ಪರಿಹರಿಸಲು ಈಗಿನ 60 ದಿನಗಳ ಅವಧಿಯನ್ನು 45 ದಿನಗಳಿಗೆ ತಗ್ಗಿಸಿರುವುದು ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಎಂದು ಹೇಳಬಹುದು. ಸಂಸದೀಯ ಸ್ಥಾಯಿ ಸಮಿತಿಯೊಂದು ಮಾಡಿದ ಶಿಫಾರಸಿನನ್ವಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಜನರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಕೇಂದ್ರ ಸರ್ಕಾರ ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಪರಿಹಾರ ವ್ಯವಸ್ಥೆ (ಸಿಪಿಜಿಆರ್​ಎಎಂಎಸ್) ಯನ್ನು ಸ್ಥಾಪಿಸಿದೆ. 2020ರಲ್ಲಿ ಈ ಪೋರ್ಟಲ್ ಮೂಲಕ ಸರ್ಕಾರಕ್ಕೆ 22 ಲಕ್ಷ ದೂರುಗಳು ಸಲ್ಲಿಕೆಯಾಗಿದ್ದವು. 2021ನೇ ಸಾಲಿನಲ್ಲಿ ಈವರೆಗೆ 12 ಲಕ್ಷ ದೂರುಗಳು ಬಂದಿವೆ. ಈ ಪೋರ್ಟಲ್​ಗೆ ದೂರು ಬಂದ ಗರಿಷ್ಠ 45 ದಿನಗಳಲ್ಲಿ ಅವನ್ನು ಪರಿಹರಿಸಬೇಕು ಎಂದು ಸರ್ಕಾರ ಈಗ ಸೂಚಿಸಿದೆ.

ಹೀಗೆ ಜನರಿಂದ ಬರುವ ದೂರುಗಳಲ್ಲಿ ಕರೊನಾ ಸಂಬಂಧಿತ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಮೂರು ದಿನಗಳಲ್ಲಿ ಅವನ್ನು ಬಗೆಹರಿಸಲಾಗುತ್ತದೆ. ಈ ಸಿಪಿಜಿಆರ್​ಎಎಂಎಸ್ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ವಿಶ್ಲೇಷಿಸಿದಾಗ, ಶೇ.87 ಸಚಿವಾಲಯಗಳು ತಮಗೆ ಬಂದ ದೂರುಗಳನ್ನು 45 ದಿನಗಳ ಒಳಗೆ ಬಗೆಹರಿಸಿವೆ ಎಂದು ಸರ್ಕಾರ ತಿಳಿಸಿದೆ. ಕೆಲವು ಇಲಾಖೆಗಳ ವ್ಯಾಪ್ತಿಯಲ್ಲಿ ಜನರಿಂದ ಅತಿ ಹೆಚ್ಚು ದೂರುಗಳು ದಾಖಲಾಗುತ್ತವೆ. ಒಟ್ಟು ದೂರುಗಳಲ್ಲಿ ಶೇ.70 ಕೇವಲ ಐದು ಇಲಾಖೆಗಳಿಗೆ ಸಂಬಂಧಿಸಿದ್ದಾಗಿವೆ. ಹಣಕಾಸು ಸೇವಾ ಇಲಾಖೆಗೆ ಐದು ಲಕ್ಷ ಮತ್ತು ದೂರಸಂಪರ್ಕ ಇಲಾಖೆಗೆ ಸಂಬಂಧಿಸಿ ಮೂರು ಲಕ್ಷ ದೂರುಗಳು ಬಂದಿವೆ. ಸಾರ್ವಜನಿಕರೊಡನೆ ಸಂವಹನಕ್ಕೆ ಮತ್ತು ಜನರ ಕುಂದುಕೊರತೆಗಳನ್ನು ಆಲಿಸಿ, ಸ್ಪಂದಿಸುವುದಕ್ಕೆ ತಂತ್ರಜ್ಞಾನ ಬಹಳ ಸಹಾಯಕಾರಿಯಾಗಬಲ್ಲದು. ಈಗ ಅಂತರ್ಜಾಲ ಬಳಕೆ ಸಹ ಹೆಚ್ಚಿರುವುದರಿಂದ ಜನರಿಗೂ ದೂರುದುಮ್ಮಾನಗಳನ್ನು ಹೇಳಿಕೊಳ್ಳಲು ಉತ್ತಮ ವೇದಿಕೆಯೊಂದು ಸಿಕ್ಕಂತಾಗುತ್ತದೆ. ಹೀಗೆ ಬಂದ ದೂರು, ಕುಂದುಕೊರತೆ ವಿಷಯಗಳನ್ನು ಪರಿಶೀಲಿಸಿ, ನಿಷ್ಕರ್ಷಿಸಿ, ಸಂಬಂಧಪಟ್ಟ ಇಲಾಖೆಗೆ ರವಾನಿಸಿ ಅಲ್ಲಿಂದ ಆದಷ್ಟು ಶೀಘ್ರ ಪರಿಹಾರ ದೊರೆಯುವಂತೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಹೀಗೆ ಮಾಡದಿದ್ದಲ್ಲಿ ವ್ಯವಸ್ಥೆಯ ಬಗ್ಗೆ ಜನರಿಗೆ ನಂಬಿಕೆ ಮೂಡುವುದಿಲ್ಲ.

ದೈನಂದಿನ ಹಾಜರಾತಿ ಕಟ್ಟುನಿಟ್ಟು ಮಾಡಿದ್ದು, ಅದಕ್ಷ ನೌಕರರಿಗೆ ಸೇವೆಯಿಂದ ವಜಾ ಸೇರಿದಂತೆ ವಿವಿಧ ಕಠಿಣ ಕ್ರಮಗಳು- ಈ ಮುಂತಾದ ವಿಧಾನಗಳ ಮೂಲಕ ಆಡಳಿತಶಾಹಿಯ ಕಾರ್ಯದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದ್ದು ಗಮನಾರ್ಹ. ಅಧಿಕಾರಿ-ಸಿಬ್ಬಂದಿ ಸಹ ತಾವು ಸಾರ್ವಜನಿಕ ಸೇವಕರು ಎಂಬ ಮನಸ್ಥಿತಿ ರೂಢಿಸಿಕೊಂಡು, ಜನರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಮುಂದಾದಲ್ಲಿ ಆಡಳಿತದಲ್ಲಿ ಹೆಚ್ಚು ಪರಿಣಾಮ ಕಾಣಬಹುದು.

Share This Article

ಖಾಲಿ ಹೊಟ್ಟೆಯಲ್ಲಿ ಒಂದು ಚಿಟಿಕೆ ಶುಂಠಿ ತಿಂದು, ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Ginger

Ginger: ಅಡುಗೆಯ ರುಚಿ ಹೆಚ್ಚಿಸಲು ನಾವು ವಿವಿಧ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತೇವೆ, ಅವುಗಳಲ್ಲಿ ಶುಂಠಿಯೂ…

ಸಣ್ಣ ಇರುವವರು ದಪ್ಪವಾಗಲು ಇಲ್ಲಿದೆ ಸುಲಭ ಮಾರ್ಗ: ಇಂತಹ ನ್ಯಾಚುರಲ್​​ ಆಹಾರ ಸೇವಿಸಿದ್ರೆ ಸಾಕು| Weight Gain

Weight Gain: ಸಾಮಾನ್ಯವಾಗಿ ದಪ್ಪಗಿರುವ ವ್ಯಕ್ತಿಗಳು ಸಣ್ಣದಾಗಲು ಕಷ್ಟ ಎಂದು ಬಹುತೇಕರು ಪರಿಗಣಿಸುತ್ತಾರೆ. ಆದರೆ, ಸಣಕಲು…

ನಾಗರಹಾವು ಕಚ್ಚಿದ್ರೆ ತಕ್ಷಣ ಈ ರೀತಿ ಮಾಡಿ… ಇಲ್ಲವಾದಲ್ಲಿ ಮೂರೇ ನಿಮಿಷಕ್ಕೆ ಪ್ರಾಣ ಹೋಗುತ್ತೆ! Cobra Snake

Cobra Snake : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು…