ವಿಶ್ವಾಸಾರ್ಹತೆಯ ಸವಾಲು: ಪ್ರಮುಖ ತನಿಖಾ ಸಂಸ್ಥೆಗೆ ವಜ್ರ ಮಹೋತ್ಸವ ಸಂಭ್ರಮ

ಭಾರತದ ಪ್ರಮುಖ ತನಿಖಾ ಸಂಸ್ಥೆಯಾದ ಸಿಬಿಐ (ಸೆಂಟ್ರಲ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್) 60 ವರ್ಷಗಳನ್ನು ಪೂರ್ಣಗೊಳಿಸಿ ಸೋಮವಾರ ವಜ್ರ ಮಹೋತ್ಸವವನ್ನು ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಮತ್ತು ನ್ಯಾಯದ ಬಹುದೊಡ್ಡ ಅಡತಡೆ ಎಂದರೆ ಅದು ಭ್ರಷ್ಟಾಚಾರ. ಭಾರತವನ್ನು ಭ್ರಷ್ಟಾಚಾರಮುಕ್ತಗೊಳಿಸುವುದು ಸಿಬಿಐನ ಬಹುದೊಡ್ಡ ಹೊಣೆಗಾರಿಕೆಯಾಗಿದೆ ಎಂದು ಹೇಳಿರುವುದು ವಾಸ್ತವದ ಪ್ರತೀಕವಾಗಿದೆ. ಏಕೆಂದರೆ, ಯಾವುದೇ ಮಹತ್ವದ ಪ್ರಕರಣಗಳಿದ್ದರೆ ಅದರ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಬೇಡಿಕೆ ಸಾಮಾನ್ಯವಾಗಿ ಕೇಳಿಬರುತ್ತದೆ. ಅಷ್ಟರ ಮಟ್ಟಿಗೆ ಸಾರ್ವಜನಿಕ ವಲಯದಲ್ಲಿ … Continue reading ವಿಶ್ವಾಸಾರ್ಹತೆಯ ಸವಾಲು: ಪ್ರಮುಖ ತನಿಖಾ ಸಂಸ್ಥೆಗೆ ವಜ್ರ ಮಹೋತ್ಸವ ಸಂಭ್ರಮ