ಸಂಪಾದಕೀಯ | ಭರವಸೆಯ ಹೊಸ ಹಾದಿ; ಹಬ್ಬಗಳು ಆತ್ಮಾವಲೋಕನಕ್ಕೆ ನಾಂದಿಯಾಗಲಿ

ವಸಂತಾಗಮನದ ಹಿನ್ನೆಲೆಯಲ್ಲಿ ಇಡೀ ಪ್ರಕೃತಿ ಸಡಗರಪಡುತ್ತಿರುವಾಗ ಇಂದು ಅಡಿಯಿಡುತ್ತಿರುವ ಶುಭಕೃತ್ ಸಂವತ್ಸರ ಬಹಳಷ್ಟು ನಿರೀಕ್ಷೆ, ಭರವಸೆ ಮೂಡಿಸಿದೆ. ಹೆಸರಿಗೆ ಅನ್ವರ್ಥವಾಗಿ ಶುಭದ ಹಾದಿಯನ್ನು ವಿಸ್ತಾರಗೊಳಿಸಿ, ಸಂಕಷ್ಟದ ಕಾಮೋಡ ಕರಗುವಂತಾಗಲಿ. ಕಳೆದ ಎರಡು ವರ್ಷಗಳಲ್ಲಿ ಕರೊನಾ ಸೃಷ್ಟಿಸಿದ ತಲ್ಲಣ ಅಷ್ಟಿಷ್ಟಲ್ಲ. ಅದು ಮನುಕುಲಕ್ಕೆ ಹಲವು ಪಾಠ ಕಲಿಸಿದೆ; ಜೀವನವನ್ನು ಹೊಸ ದೃಷ್ಟಿಯಿಂದ ನೋಡುವಂತೆ ಮಾಡಿದೆ. ಆದರೆ, ಜನಸಾಮಾನ್ಯರು ಬೆಲೆಯೇರಿಕೆಯ ಭಾರ, ಆರ್ಥಿಕ ಸಂಕಷ್ಟದಿಂದ ಬಸವಳಿದಿದ್ದು, ಮುಂದಿನ ದಿನಗಳು ಒಳಿತನ್ನೇ ತರಲಿ ಎಂಬ ಆಶಾಭಾವನೆಯಿಂದ ಹೊಸವರ್ಷವನ್ನು ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ, … Continue reading ಸಂಪಾದಕೀಯ | ಭರವಸೆಯ ಹೊಸ ಹಾದಿ; ಹಬ್ಬಗಳು ಆತ್ಮಾವಲೋಕನಕ್ಕೆ ನಾಂದಿಯಾಗಲಿ