ಚಾಲಕನ ಮೇಲಾಟಕ್ಕೆ ಬಲಿಯಾದ ವೃದ್ಧೆ; ಆರೋಪಿ ಪರಾರಿ..

ಮೈಸೂರು: ಅವಸರವೇ ಅಪಘಾತಕ್ಕೆ ಕಾರಣ, ಅತಿವೇಗ ತಿಥಿಬೇಗ ಎಂಬಂಥ ಬರಹಗಳು ಬಸ್​ಗಳ ಮೇಲೆಯೇ ಸಾಮಾನ್ಯವಾಗಿ ಬರೆದಿಡಲಾಗಿರುತ್ತದೆ. ಅದಾಗ್ಯೂ ಇಲ್ಲಿ ಚಾಲಕನೊಬ್ಬನ ವೇಗದ ಆವೇಗಕ್ಕೆ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಕೆ.ಆರ್​.ನಗರದ ಸತ್ತಿ ಗ್ರಾಮದ ಪುಟ್ಟಶೆಟ್ಟಿ ಎಂಬವರ ಪತ್ನಿ ನೀಲಮ್ಮ (69) ಅನ್ಯಾಯವಾಗಿ ಸಾವಿಗೀಡಾದ ವೃದ್ಧೆ. ಕೆಎಸ್​ಆರ್​​ಟಿಸಿ ಬಸ್​ ಚಾಲಕ ಇನ್ನೊಂದು ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಈಕೆಗೆ ಡಿಕ್ಕಿ ಹೊಡೆದಿದ್ದು, ನೀಲಮ್ಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಪಘಾತದ ತೀವ್ರತೆಗೆ ನೀಲಮ್ಮ … Continue reading ಚಾಲಕನ ಮೇಲಾಟಕ್ಕೆ ಬಲಿಯಾದ ವೃದ್ಧೆ; ಆರೋಪಿ ಪರಾರಿ..