ಜನರಲ್ಲಿ ನೈತಿಕ ಪ್ರಜ್ಞೆ ಬೆಳಸಲು ನಾಟಕಗಳು ಸಹಕಾರಿ

Dramas are helpful in developing moral consciousness among people.

ಹುನಗುಂದ: ನಾಟಕಗಳು ಜನರಲ್ಲಿ ನೈತಿಕ ಪ್ರಜ್ಞೆ, ಮನರಂಜನೆ ಜತೆಗೆ ಜೀವನ ಮೌಲ್ಯಗಳನ್ನು ಮೂಡಿಸುತ್ತವೆ ಎಂದು ಇಳಕಲ್ಲ ಗುರುಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹೊನ್ನಗುಂದ ಸಂಸ್ಕೃತಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಟಕದಲ್ಲಿನ ದೃಶ್ಯ ಮುನುಷ್ಯನನ್ನು ಹೆಚ್ಚು ಪರಿಣಾಮಕಾರಿ ಆಗಿ ಪರಿವರ್ತನೆ ಮಾಡಬಲ್ಲದು. ನಾಟಕ ಎರಡು ಸಾವಿರ ವರ್ಷದ ಇತಿಹಾಸ ಹೊಂದಿದೆ. ಶಿವಸಂಚಾರ ಸಾಣೇಹಳ್ಳಿ ತಂಡದಲ್ಲಿ ಉತ್ತಮ ರಂಗ ಕಲಾವಿದರನ್ನು ಒಳಗೊಂಡಿದ್ದು, ನಾಟಕಗಳು ಉತ್ತಮವಾಗಿ ಮೂಡಿಬರಲಿ ಎಂದು ಆಶಿಸಿದರು.

ಪಿ. ಬಿ. ದುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್. ಕೆ. ಕೊನೆಸಾಗಾರ ಮಾತನಾಡಿ, ರಂಗಭೂಮಿಗೆ ಹುನಗುಂದ ಪಟ್ಟಣ ತವರುಭೂಮಿ. ಇಲ್ಲಿ ಸ್ವತಂತ್ರ ಪೂರ್ವದಲ್ಲೇ ರಂಗ ಚಟುವಟಿಕೆ ಜೋರಾಗಿದ್ದವು. ಹೆಚ್ಚು ಹೆಚ್ಚು ರಂಗ ಚಟುವಟಿಕೆ ಕೈಗೊಂಡಾಗ ರಂಗಭೂಮಿ ಜೀವಂತಿಕೆ ಇರುತ್ತದೆ. ನಿನಾಸಂ ರೀತಿ ಸಾಣೇಹಳ್ಳಿ ರಂಗ ಚಟುವಟಿಕೆ ಮೂಲಕ ಜಗತ್ತಿಗೆ ತೆರೆದುಕೊಳ್ಳುತ್ತಿದೆ ಎಂದರು. ಮಹಾಂತೇಶ ಅಗಸಿಮುಂದಿನ ಸಮಾರೋಪ ಭಾಷಣ ಮಾಡಿದರು.

ಡಾ. ಮಹಾಂತೇಶ ಕಡಪಟ್ಟಿ, ಹೆಸ್ಕಾಂ ಶಾಖಾಧಿಕಾರಿ ದತ್ತು ದಾಯಿಗುಡಿ, ಅಶೋಕ ಭಾವಿಕಟ್ಟಿ, ಮುತ್ತಣ್ಣ ಕಲಗೋಡಿ ಎಸ್. ಆರ್ ಲ್. ಗೋಲಗುಂಡ, ಸಂಗಮೇಶ ಪಾಟೀಲ ಇತರರಿದ್ದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…